ದಾವಣಗೆರೆ: ಬೈಕ್ ನಲ್ಲಿ ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಚಾಕು ತೋರಿಸಿ 5 ಸಾವಿರ ಹಣ ಮತ್ತು 7 ಸಾವಿರ ಮೌಲ್ಯದ ಮೊಬೈಲ್ ಗಳನ್ನು ಅಪರಿಚಿತರು ಕಿತ್ತುಕೊಂಡು ಪರಾರಿಯಾದ ಘಟನೆ ತಾಲ್ಲೂಕಿನ ಆನಗೋಡು ಗ್ರಾಮದ ಮರುಳ ಸಿದ್ದೇಶ್ವರ ದೇವಸ್ಥಾನ ಬಳಿ ನಡೆದಿದೆ.
ತಾಲ್ಲೂಕಿನ ಗುಡಾಳ್ ಮ್ಯಾಸರಹಳ್ಳಿ ಗ್ರಾಮದ ಪ್ರಭು ಡಿ.ಎಂ ರಾತ್ರಿ ಬೈಕ್ ನಲ್ಲಿ ಆನಗೋಡು ಗ್ರಾಮದ ಮರುಳ ಸಿದ್ದೇಶ್ವರ ಗ್ರಾಮದ ಬಳಿ ಹೋಗುವಾಗ ಈ ಘಟನೆ ಸಂಭವಿಸಿದೆ.ಈ ಬಗ್ಗೆ ಪ್ರಭು ದಾವಣಗೆರೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



