ದಾವಣಗೆರೆ: ಸರ್ಕಾರಿ ಶಾಲೆಯ ಬಿಸಿಯೂಟ ಯೋಜನೆಯ ಅಡುಗೆ ಸಾಮಾನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನ್ಯಾಮತಿ ಟೌನ್ ಕೊಡಿಕೊಪ್ಪ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ಸ್ವತ್ತು ವಶಕ್ಕೆ ಪಡೆಯಲಾಗಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಮತಿ ಟೌನ್ ನ ಕೊಡಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಬಳಸುವ ತಟ್ಟೆ, ಲೋಟ, ಪಾತ್ರೆಗಳನ್ನು ಹಾಗೂ ಇತರೆ ಉಪಕರಣಗಳನ್ನು ಯಾರೋ ಕಳ್ಳತನ ಮಾಡಿಕೊಙಡು ಹೋಗಿದ್ದರು.
ಈ ಸಂಬಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಉಸ್ತುವಾರಿಯಲ್ಲಿ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್ ನ್ಯಾಮತಿ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ಈ ತಂಡವು ಪ್ರಕರಣದ ಆರೋಪಿ ಪತ್ತೆಕಾರ್ಯ ಕೈಗೊಂಡಿದ್ದು, ಎ1. ಸತೀಶ, 29 ವರ್ಷ, ಗಾರೆ ಕೆಲಸ, ನ್ಯಾಮತಿ ಟೌನ್ ., ಎ2. ಅಪ್ಸರ್ ಜೆ @ ಶಬ್ಬಿರ್, 23 ವರ್ಷ, ಐಸ್ ವ್ಯಾಪಾರ, ಶಿವಾನಂದಪ್ಪ ಬಡಾವಣೆ, ನ್ಯಾಮತಿ ಟೌನ್ ಇವರನ್ನು ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದಾಗ ತಾವುಗಳು ಕೊಡಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ಬಗ್ಗೆ ಒಪ್ಪಿಕೊಂಡಿದ್ದಾರೆ.
ಏನೆಲ್ಲಾ ಕಳ್ಳತನ; ಸರ್ಕಾರಿ ಶಾಲೆಯಲ್ಲಿ ಕಳ್ಳತನ ಮಾಡಿದ್ದ 1. ಒಂದು ಅನ್ನ ಬಸಿಯುವ ಸಿಲ್ವರ್ ಪಾತ್ರೆ., 2. ಸಿಲ್ವರ್ ನ 02 ದೊಡ್ಡ ಪಾತ್ರೆಗಳು., 3. ಒಂದು ಚಿಕ್ಕ ಸಿಲ್ವರ್ ಪಾತ್ರೆ 4. ಪಾತ್ರೆಗೆ ಮುಚ್ಚುವ ಒಂದು ಮುಚ್ಚಳ 5. ಸ್ಟಿಲ್ ನ 03 ಅನ್ನ ಬಡಿಸುವ ಸೌಟ್ ಗಳು 6. ಸ್ಟೀಲ್ ನ 04 ಸಾಂಬಾರು ಬಡಿಸುವ ಸೌಟ್ ಗಳು 7. ಸ್ಟೀಲ್ ನ 145 ನೀರು ಕುಡಿಯುವ ಲೋಟಗಳು 8. ಸ್ಟೀಲ್ ನ 120 ಊಟದ ತಟ್ಟೆಗಳು 9. ಒಂದು ಹಾರೆ, 10. ಒಂದು ಸಲಿಕೆ ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳ ಒಟ್ಟು ಮೌಲ್ಯ ಸುಮಾರು 25.000/- ರೂಗಳಾಗಿರಬಹುದೆಂದು ಅಂದಾಜಿಸಲಾಗಿರುತ್ತದೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪ್ರಕರಣದ ಪತ್ತೆಕಾರ್ಯದಲ್ಲಿ ಭಾಗಿಯಾದ ತಂಡಕ್ಕೆ ಉಮಾ ಪ್ರಶಾಂತ ಪ್ರಶಂಸಿಸಿದ್ದಾರೆ.
ಕಳ್ಳತನವಾಗಿದ್ದ ಸ್ವತ್ತುನ್ನು ಶಾಲೆಗೆ ಹಸ್ತಾಂತರ: ಆರೋಪಿತರಿಂದ ವಶಪಡಿಸಿಕೊಂಡಿದ್ದ ಸ್ವತ್ತನ್ನು ಮಾನ್ಯ ಘನ ನ್ಯಾಯಾಲಯದ ಅನುಮತಿ ಮೇರೆಗೆ ನ್ಯಾಮತಿ ಪೊಲೀಸ್ ಠಾಣೆಯ ಅಧಿಕಾರಿಗಳು ನ್ಯಾಮತಿ ಟೌನ್ ನ ಕೊಡಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿಗಳ (ಮುಖ್ಯೋಪಾಧ್ಯಾಯರವರ) ವಶಕ್ಕೆ ಹಸ್ತಾಂತರಿಸಲಾಯಿತು.



