ದಾವಣಗೆರೆ: ಸುಲಿಗೆ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಒಟ್ಟು 12,28,000 ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ ಏನೆಲ್ಲಾ ವಶಕ್ಕೆ ಪಡೆಯಲಾಗಿದೆ..?
ಆರೋಪಿತರುಗಳಿಂದ ಕೃತ್ಯಕ್ಕೆ ಬಳಸಿದ ಒಂದು ಮಚ್ಚು, ಹಾಗೂ ಸುಲಿಗೆ ಮತ್ತು ಮನೆಕಳ್ಳತನ ಮಾಡಿದ್ದ ಒಟ್ಟು 12,28,000/- ರೂ ಬೆಲೆ ಬಾಳುವ 02 ಮಾಂಗಲ್ಯ ಸರಗಳು, ಒಂದು ಜೊತೆ ಬೆಂಡೋಲೆ, ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿರುತ್ತದೆ. ಆರೋಪಿತರುಗಳನ್ನು ಬಂಧಿಸಿ ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ದಿನಾಂಕ 27/04/2025 ರಂದು ಚಿರಡೋಣಿ ಕ್ಯಾಂಪ್ ನ ಹಂಸತಾರಕಂ ತಮ್ಮ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದಾಗಿದ್ದರು. ಮನೆಯಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಹೊಡೆದು ಮನೆಯ ಬೀರುವನ್ನು ಓಪನ್ ಮಾಡಿ ಅದರಲ್ಲಿದ್ದ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ ದಿನಾಂಕ 14/08/2025 ರಂದು ರಾತ್ರಿ 07-40 ಸಮಯದಲ್ಲಿ ಚಿರಡೋಣಿ ಕ್ಯಾಂಪ್ ಸುಮಲತಾ ಹಾಗೂ ಅವರ ಅತ್ತೆ ವೀರಯಮ್ಮ ತಮ್ಮ ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತರು ಕಪ್ಪು ಬಣ್ಣದ ಬಟ್ಟೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಅಡಿಕೆ ಸುಲಿಯುವ ಕತ್ತಿಯನ್ನು ಮತ್ತು ಚಾಕುಗಳನ್ನು ಹಿಡಿದುಕೊಂಡು ಮನೆಯ ಹಿಂಬಾಗಿಲಿನ ಮುಖಾಂತರ ಮನೆಯೊಳಗೆ ಪ್ರವೇಶಿಸಿ ವೀರಯಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಕೊರಳಿನಲ್ಲಿದ್ದ 02 ಬಂಗಾರದ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಎರಡು ಪ್ರಕರಣಗಳಲ್ಲಿನ ಆರೋಪಿತರನ್ನು ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ್ , ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ, ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಜಿಲ್ಲಾ ಸುಕೋ ಟೀಮ್ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಈ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ.
ಮೂವರು ಆರೋಪಿಗಳ ಬಂಧನ
ಎ1) ಶಿವಮೂರ್ತಿ @ ಮುರುಡ ತಂದೆ ತೋಳಪ್ಪರ ಕರಿಯಪ್ಪ ಎ2) ರಮೇಶ್ @ ಗಿಡ್ಡ ರಾಮ ಬಿನ್ ಕೋನೆಯಪ್ಪರ ಬಸಪ್ಪ ಇಬ್ಬರೂ ಚಿರಡೋಣಿ ಗ್ರಾಮ, ಚನ್ನಗಿರಿ ತಾಲ್ಲೂಕು ಇವರುಗಳನ್ನು ಚಿರಡೋಣಿ ಗ್ರಾಮದ ಸತ್ಯನಾರಾಯಣ ರವರ ಮನೆಯ ಸುಲಿಗೆ ಪ್ರಕರಣದಲ್ಲಿ ಹಾಗೂ ಮೇಲ್ಕಂಡ ಆರೋಪಿತರೊಂದಿಗೆ ಶಾಮಿಲಾಗಿದ್ದ ಎ3) ರುದ್ರೇಶ ತಂದೆ ಮಹಾದೇವಪ್ಪ ಇವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಮಚ್ಚು, ಹಾಗೂ ಸುಲಿಗೆ ಮತ್ತು ಮನೆಕಳ್ಳತನ ಮಾಡಿದ್ದ ಒಟ್ಟು 12,28,000/- ರೂ ಬೆಲೆ ಬಾಳುವ 02 ಮಾಂಗಲ್ಯ ಸರಗಳು, ಒಂದು ಜೊತೆ ಬೆಂಡೋಲೆ, ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿರುತ್ತದೆ. ಆರೋಪಿತರುಗಳನ್ನು ಬಂಧಿಸಿ ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತದೆ.
ಆರೋಪಿತರುಗಳನ್ನು ಪತ್ತೆ ಮಾಡಿ ಎರಡೂ ಪ್ರಕರಣಗಳಲ್ಲಿ ಸುಮಾರು ರೂ 12,28,000/- ರೂ ಮೌಲ್ಯದ ಬೆಲೆ ಬಾಳುವ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.