Connect with us

Dvgsuddi Kannada | online news portal | Kannada news online

ದಾವಣಗೆರೆ: ವಯೋವೃದ್ಧರ ಪಾಲನೆ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣ ಕಳ್ಳತನ; ಆರೋಪಿ ಬಂಧನ

ktj nagara 2

ದಾವಣಗೆರೆ

ದಾವಣಗೆರೆ: ವಯೋವೃದ್ಧರ ಪಾಲನೆ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣ ಕಳ್ಳತನ; ಆರೋಪಿ ಬಂಧನ

ದಾವಣಗೆರೆ: ಮನೆಯಲ್ಲಿ ಹಾಸಿಗೆ ಹಿಡಿದ ವಯೋವೃದ್ಧರ ಪಾಲನೆ ಮಾಡುವ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ದೂರುದಾರ ರಾಘವೇಂದ್ರ.ಪಿ ಎಂಬುವವರು ತಮ್ಮ ಹಾಸಿಗೆ ಹಿಡಿದ ತನ್ಮ ತಂದೆ ಪದ್ಮನಾಭಶೆಟ್ಟಿ ತನೋಡಿಕೊಳ್ಳಲು ಶ್ರೀ ಗುರುಕೊಟ್ಟುರೇಶ್ವರ ಹೋಮ್ ನರ್ಸಿಂಗ್ ಸರ್ವೀಸ್ ಏಜೆನ್ಸಿಯಿಂದ ಪ್ರತಿ ತಿಂಗಳು 18000/- ರೂ ವೇತನದಂತೆ ವಿಜಯ್ ಎಂಬುವವನಿಗೆ ದಿನಾಂಕ:04-03-2025 ರಂದು ನೇಮಕ ಮಾಡಿಕೊಂಡಿದ್ದು, ಅದರಂತೆ ವಿಜಯ್ ದಿನಾಂಕ:01-04-2025 ರಂದು ಬೆಳಿಗ್ಗ ಮನೆಯ ರೂಮ್ ವಾಲ್ ಡ್ರೂಪ್ ಡ್ರಾ ನಲ್ಲಿಟ್ಟಿದ್ದ 95 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ‌ ಮಾಡಿಕೊಂಡು ಹೋಗಿದ್ದಾನೆ. ಪತ್ತೆ ಮಾಡಿಕೊಡಿ ಎಂದು ದಿ:02.04.2025 ರಂದು ದೂರು ನೀಡಿದ್ದರು.

ಈ ಮೇರೆಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಖ್ಳಲಾಗಿತ್ತು‌. ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ್ ಎಂ.ಸಂತೋ಼ಷ್, ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ. ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದ ತಂಡದ ಪಿ.ಎಸ್.ಐ ಲತಾ.ಆರ್. ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ದಿ:17.04.2025 ರಂದು ಆರೋಪಿತನಾದ ಭದ್ರಪ್ಪ ಬಸಪ್ಪ ಹಡಪದ‌(29) ವಾಸ: ಮಣ್ಣೂರು ಗ್ರಾಮ ದೇವರಹಿಪ್ಪರಗಿ ತಾಲ್ಲೂಕ್ ಬಿಜಾಪುರ ಜಿಲ್ಲೆ ಇವನನ್ನು ವಶಕ್ಕೆ ಪಡೆದುಕೊಂಡು, ಆರೋಪಿತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದ 1)ಕೆ.ಟಿಜೆ ನಗರ ಪೊಲೀಸ್ ಕಳ್ಳತನ ಪ್ರಕರಣದಲ್ಲಿ ಕಳ್ಳತನವಾದ ಅಂದಾಜು 8,00,000/-ರೂ ಬೆಲೆ ಬಾಳುವ 95 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ದೂರುದಾರರ ಬಾಬ್ತು 95 ಗ್ರಾಂ ಬಂಗಾರದ ಆಭರಣಗಳನ್ನು ನ್ಯಾಯಾಲಯದ ಅನುಮತಿ ಆದೇಶದ ಮೇರೆಗೆ ಎಸ್ಪಿ ಉಮಾಪ್ರಶಾಂತ್ ರಾಘವೇಂದ್ರ.ಪಿ ಅವರಿಗೆ ಹಸ್ತಾಂತರಿಸಿ ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಫನ್ನು ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top