ದಾವಣಗೆರೆ: ಸಂಧ್ಯಾ ಸುರಕ್ಷಾ ಯೋಜನೆ (sandhya suraksha yojana) ನಕಲಿ ಮಂಜೂರಾತಿ ಪತ್ರ ನೀಡಿದ ಆರೋಪ ಹಿನ್ನೆಲೆ ಸೇವಾ ಸಿಂಧು ಸೇವಾ ಕೇಂದ್ರದ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಜಿಲ್ಲೆಯ ಕಂದಗಲ್ಲು ಗ್ರಾಮದ ಸೇವಾ ಸಿಂಧು ಕೇಂದ್ರದ ನವೀನ್ ನಕಲಿ ಮಂಜೂರಾತಿ ಪತ್ರ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಸರ್ಕಾರದ ಡಿಜಿಟಲ್ ಸಹಿ ಇಲ್ಲದೆ, ಸಾಮಾಜಿಕ ಭದ್ರತೆ ಯೋಜನೆ ಸಂಧ್ಯಾ ಸುರಕ್ಷಾ ನಕಲಿ ಮಂಜೂರಾತಿ ಪತ್ರ ನೀಡಿ, ಹಣ ಪಡೆದುಕೊಂಡ ಆರೋಪವಿದೆ.
ನವೀನ್ ಪಿ.ಜಿ. ನಕಲಿ ಮಂಜೂರಾತಿ ಪತ್ರಗಳನ್ನು ನೀಡಿದ್ದು, ಪತ್ರಗಳನ್ನು ಪರಿಶೀಲಿಸಿದಾಗ ಆದೇಶ ಪ್ರತಿಗಳಿಗೆ ಇಲಾಖೆಯ ಯಾವುದೇ ಡಿಜಿಟಲ್ ಸಹಿ ಇಲ್ಲ. ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕ ಅಧಿಕಾರಿ ಹಾಗೂ ಫಲಾನುಭವಿ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



