Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಓರ್ವ ವ್ಯಕ್ತಿಗೆ ನಾಲ್ವರಿಂದ ಹಲ್ಲೆ; ತಡೆಯಲು ಬಂದ ಪೊಲೀಸರ ಮೇಲೆ ದಾಳಿ ;ಓರ್ವ ಬಂಧನ

davangere police 16

ದಾವಣಗೆರೆ

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಓರ್ವ ವ್ಯಕ್ತಿಗೆ ನಾಲ್ವರಿಂದ ಹಲ್ಲೆ; ತಡೆಯಲು ಬಂದ ಪೊಲೀಸರ ಮೇಲೆ ದಾಳಿ ;ಓರ್ವ ಬಂಧನ

ದಾವಣಗೆರೆ: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಓರ್ವ ವ್ಯಕ್ತಿಯನ್ನು ತಡೆದು, ಹಲ್ಲೆ ಮಾಡುತ್ತಿದ್ದುದನ್ನು ತಡೆಯಲು ಬಂದ ಪೊಲೀಸರ ಮೇಲೆಯೇ ದಾಳಿ ಮಾಡಿದ ನಾಲ್ವರ ಪೈಕಿ ಓರ್ವನನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಇಆರ್‌ಎಸ್‌ಎಸ್‌ (ಹೊಯ್ಸಳ 112) ಸಿಬ್ಬಂದಿ ಬೈಕ್‌ ಸಮೇತ ಬಂಧಿಸಿದ್ದಾರೆ.

ಇಆರೆಸ್ಸೆಸ್‌ ವಾಹನದ ಸಿಬ್ಬಂದಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಟಿ.ಮಾಲತೇಶ, ವಾಹನ ಚಾಲಕ, ಕಾನ್‌ಸ್ಟೇಬಲ್‌ ಎ.ವಿನೋದಕುಮಾರ ತಾಲೂಕಿನ ಎಚ್.ಕಲ್ಪನಹಳ್ಳಿಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅವರ ಕಣ್ಣಿಗೆ ಹೆದ್ದಾರಿ ಪಕ್ಕ ಯಾರೋ ನಾಲ್ವರು ಅಪರಿಚಿತರು ಒಬ್ಬನನ್ನು ತಡೆದು, ಹಲ್ಲೆ ಮಾಡುತ್ತಿದ್ದುದನ್ನು ಕಂಡು ತಡೆಯಲು ಹೋಗಿದ್ದಾರೆ.

ಪೊಲೀಸ್ ವಾಹನ ಕಂಡು ಒಂದೇ ಬೈಕಿನಲ್ಲಿ ನಾಲ್ವರು ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದರು. ಅವರನ್ನು ಟಿ.ಮಾಲತೇಶ ಹಾಗೂ ಎ.ವಿನೋದಕುಮಾರ ಹಿಂಬಾಲಿಸಿ, ಹಿಡಿಯಲು ಪ್ರಯತ್ನಿಸುತ್ತಿದ್ದರು. ಆಗ ನಾಲ್ವರು ಬೈಕ್‌ನಿಂದ ಇಳಿದು, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಮೂವರು ಕತ್ತಲಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಓರ್ವ ಆರೋಪಿ ಬೈಕ್ ಸಮೇತ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯನ್ನು ಬೈಕ್ ಸಮೇತ ಠಾಣೆಗೆ ಕರೆ ತಂದು, ಹಲ್ಲೆಗೊಳಗಾಗಿದ್ದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಾರಿಯಾದ ಮೂವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಹೆಡ್ ಕಾನ್‌ಸ್ಟೇಬಲ್ ಟಿ.ಮಾಲತೇಶ, ವಾಹನ ಚಾಲಕ, ಕಾನ್‌ಸ್ಟೇಬಲ್‌ ಎ.ವಿನೋದಕುಮಾರ ಕರ್ತವ್ಯಪ್ರಜ್ಞೆ, ಪರಿಶ್ರಮ ಮೆಚ್ಚಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಪ್ರಶಂಸಾ ಪತ್ರ ನೀಡಿ, ಪ್ರೋತ್ಸಾಹಿಸಿದರು. ಈ ಸಂದರ್ಭ ಪೊಲೀಸ್ ಇನ್‌ಸ್ಪೆಕ್ಟರ್‌ ತೇಜಾವತಿ, ಪೊಲೀಸ್ ನಿಸ್ತಂತು ವಿಭಾಗದ ಇನ್‌ಸ್ಟೆಕ್ಟರ್‌ ನಿತೇಶ್, ಅಧಿಕಾರಿ-ಸಿಬ್ಬಂದಿ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top