Connect with us

Dvgsuddi Kannada | online news portal | Kannada news online

ದಾವಣಗೆರೆ; ಟಿವಿ ವರದಿಗಾರರೆಂದು ಕೊಂಡಜ್ಜಿ ಗ್ರಾಮದ ರೈತರಿಂದ ಹಣ ವಸೂಲಿಗಿಳಿದಿದ್ದ ನಾಲ್ವರ ಬಂಧನ

ದಾವಣಗೆರೆ

ದಾವಣಗೆರೆ; ಟಿವಿ ವರದಿಗಾರರೆಂದು ಕೊಂಡಜ್ಜಿ ಗ್ರಾಮದ ರೈತರಿಂದ ಹಣ ವಸೂಲಿಗಿಳಿದಿದ್ದ ನಾಲ್ವರ ಬಂಧನ

ದಾವಣಗೆರೆ: ಖಾಸಗಿ ಟಿವಿ ವರದಿಗಾರರೆಂದು ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕೊಂಡಜ್ಜಿ ಗ್ರಾಮದ ರೈತ ಗಿರೀಶ್ ಎಂಬುವವರು ಹೊಲ ಮಟ್ಟ ಮಾಡಲು ಮಣ್ಣು ತುಂಬುವಾಗ ಬಂದ 5 ಜನ, ನಾವು ಪಬ್ಲಿಕ್ ಟಿವಿ ವರದಿಗಾರರು ಮಣ್ಣು ತುಂಬಲು ಪರವಾನಿಗೆ ಇದೆಯೇ ಎಂದು ಕೇಳಿದ್ದಾರೆ. ಆಗ ಗಿರೀಶ್ ಇಲ್ಲ ಎಂದು ಹೇಳಿದಾಗ 50 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಕೊಡದಿದ್ದರೆ ಸುದ್ದಿ ಮಾಡುವುದಾಗಿ ಹೆದರಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ಪುನೀತ್ ಕುಮಾರ್ ನೀಡಿದ ದೂರಿನ ಮೇಲೆ ಹರಿಹರ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸತೀಶ್ ಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಪಿಎಸ್ ಐ ವೀರಬಸಪ್ಪ ಕುಸಲಾಪುರ ತಂಡ ಬಲ್ಲೂರು ಕನ್ನಡಪರ ಸಂಘಟನೆ ತಾಲೂಕು ಅಧ್ಯಕ್ಷ ರಘು, ಪಬ್ಲಿಕ್ 24 ಕನ್ನಡ ವರದಿಗಾರ ಅಣ್ಣಪ್ಪ, ಸಂತೋಷ ಗುಡಿಮನೆ ತುಂಗಾಭದ್ರ ಪತ್ರಿಕೆ ವರದಿಗಾರ,ಚಿಕ್ಕಬಿದರಿ ಗ್ರಾಮದ ಕನಸಿನ ಭಾರತ ವಾರಪತ್ರಿಕೆ ಬರಹಗಾರ ಪಕ್ಕಿರೇಶ ಯಾದವ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.ಇನ್ನೊಬ್ಬ ಆರೋಪಿತನಾದ ಸಾಬ್‌ಜಾನ್ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top