ದಾವಣಗೆರೆ; ನಗರ ವಿನಾಯಕ ಬಡಾವಣೆಯಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.70 ಲಕ್ಷ ಮೌಲ್ಯದ ಬಂಗಾರದ ಗಟ್ಟಿ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.
ಬಡಾವಣೆಯ ಶಿಕ್ಷಕಿಯೊಬ್ಬರು ನಡೆದುಕೊಂಡು ಬರುವಾಗ ಹಿಂದಿನಿಂದ ಬಂದ ಆರೋಪಿಗಳು ಕುತ್ತಿಗೆ ಕೈಹಾಕಿ 60 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ , ತನಿಖಾಧಿಕಾರಿ ಗುರುಬಸವರಾಜ್ ಅವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಪಿಎಸ್ ಐ ಪ್ರಸಾದ್, ಪಿ.ರೇಣುಕ, ಸಿಬ್ಬಂದಿಗಳಾದ ಆನಂದಪ್ಪ, ಚಂದ್ರಪ್ಪ, ಯೋಗೇಶನಾಯ್ಕ, ತಿಪ್ಪಣ್ಣ, ಎನ್ ಆರ್ ಗೌರಮ್ಮ,ರಾಘವದ್ರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ.



