ದಾವಣಗೆರೆ: ಚನ್ನಗಿರಿ ತಾಲ್ಲಾಉಕಿನ ರಸ್ತೆಯ ಅರಣ್ಯ ಇಲಾಖೆ ವಸತಿ ಗೃಹದ ಮಹಿಳೆಯೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಲೀಲಾವತಿ (56) ಸರ ಕಳೆದುಕೊಂಡವರಾಗಿದ್ದಾರೆ. ರಾತ್ರಿ ಪಟ್ಟಣದ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಮನೆಗೆ ಬರುವಾಗ ಈ ಘಟನೆ ನಡೆದಿದೆ. ನಗರದ ಜೀವ ವಿಮೆ ರಸ್ತೆಯ ಬಳಿ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆ ಮುಂದೆ ಬೈಕ್ ನಿಲ್ಲಿಸಿ, ಕೊರಳಿನಲ್ಲಿದ್ದ 20 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



