ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಶ್ರೀಬೀರಲಿಂಗೇಶ್ವರ ದೇವಸ್ಥಾನ ಬೀಗ ಮುರಿದ ಕಳ್ಳರು, 7.97 ಲಕ್ಷ ಬೆಲೆಬಾಳುವ ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದಾರೆ.
ದೇವಸ್ಥಾನದ ಗರ್ಭಗುಡಿಗೆ ಹಾಕಲಾಗಿದ್ದ ಬಾಗಿಲ ಬೀಗ ಮುರಿದು, ಬೆಳ್ಳಿಯ ಗೆಜ್ಜೆಪಟ್ಟಿ, ಬೆಳ್ಳಿ ಛತ್ರಿ, ಬೆಳ್ಳಿಯ ಲಿಂಗದಕಾಯಿ, ಬೆಳ್ಳಿಯ ಬೆತ್ತ, ಬೆಳ್ಳಿಯ ಮಾಂತಪ್ಪ, ಬೆಳ್ಳಿ ಆರತಿ ಬಟ್ಟಲು ಹಾಗೂ ಚೌಡಮ್ಮನ ಬೆಳ್ಳಿಯ ಮುಖದ ಆಭರಣಗಳನ್ನು ಕಳವು ಮಾಡಿದ್ದಾರೆ.ದೇವಸ್ಥಾನದ ಪೂಜಾರಿ, ನೀಡಿದ ದೂರಿನನ್ವಯ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



