ದಾವಣಗೆರೆ: ಮನೆ ಕಳ್ಳತನ ಮತ್ತು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.92 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ವಶಕ್ಕೆ ಪಡೆಯಲಾಗಿದೆ.
ದಿನಾಂಕ:25/09/2022 ರಂದು ಹೆಬ್ಬಾಳ ಗ್ರಾಮದ ರುದ್ರಮುನಿ ದಾವಣಗೆರೆ ಗ್ರಾಮಾಂತರ ಠಾಣೆಗೆ ಹಾಜರಾಗಿ, ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ಗಾಡೇಜ್ ನಲ್ಲಿದ್ದ 2,70,000/- ರೂಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳವು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು.
ಆರೋಪಿತರ ಪತ್ತೆ ಕಾರ್ಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಅರ್.ಬಿ ಬಸರಗಿ ಮತ್ತು
ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಲಿಂಗನಗೌಡ ನೆಗಳೂರ , ಪಿಎಸ್ಐ ಎ.ಆರ್ ಮುಂದಿನ ಮನಿ ಮತ್ತು ಠಾಣಾ ಸಿಬ್ಬಂದಿಗಳಾದ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್ ಯುಸುಫ್ ಅತ್ತಾರ್, ರಾಜು ಲಮಾಣಿ, ವೀರೇಶ್, ಗಣೇಶನಾಯ್ಕ, ಬಸವರಾಜ ರವರನ್ನೊಳಗೊಂಡ ತಂಡ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ 01) ಹನುಮಂತಪ್ಪ @ ದೊಡ್ಡಮನಿ ಹನುಮಂತ, 38 ವರ್ಷ, ಹಮಾಲಿ ಕೆಲಸ, ವಾಸ:ಹೆಬ್ಬಾಳು ಗ್ರಾಮ, ದಾವಣಗೆರೆ ತಾಲ್ಲೂಕು, 02) ಹಾಲೇಶಪ್ಪ, 48 ವರ್ಷ, ಟೀ ಅಂಗಡಿ ವ್ಯಾಪಾರ, ವಾಸ: ಮಂಡಲೂರು ಗಾಮ್ರ, ದಾವಣಗೆರೆ ತಾಲ್ಲೂಕು. ಹಾಲಿ ವಾಸ:ಭರಮಸಾಗರ, ಚಿತ್ರದುರ್ಗ ತಾಲ್ಲೂಕು ಇವರುಗಳನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣದಲ್ಲಿ ಸುಲಿಗೆಯಾಗಿದ್ದ 86,000/- ರೂ ಬೆಲೆಯ ಬಂಗಾರದ ಆಭರಣಗಳು ಸೇರಿದಂತೆ 02 ಪ್ರಕರಣಗಳಿಂದ ಕಳವು ಮತ್ತು ಸುಲಿಗೆ ಆಗಿದ್ದ 03,06,000/- ರೂ ಬೆಲೆಗೆ ಬಂಗಾರದ ಆಭರಣಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ. ಅರುಣ್ ಶ್ಲಾಘಿಸಿದ್ದಾರೆ.



