ದಾವಣಗೆರೆ: ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 134 ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ 1.68 ಕೋಟಿ ಮೌಲ್ಯದ ಸ್ವತ್ತನ್ನು ಮೂಲ ಮಾಲೀಕರಿಗೆ ಪೊಲೀಸ್ ಇಲಾಖೆಯಿಂದ ಹಿಂತಿರುಗಿಸಲಾಯಿತು.
ಇಂದು (ಆ.02) ಹಮ್ಮಿಕೊಂಡಿದ್ದ ಪ್ರಾಪರ್ಟಿ ರಿಟರ್ನ್ ಪೆರೇಡ್ ನಲ್ಲಿ ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಜನವರಿ 1-2022 ರಿಂದ 30-06-2023 ರವರೆಗೆ ಪತ್ತೆಯಾಗಿರುವ ಒಟ್ಟು 1,68,96,744/- ರೂ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ವಾಪಸ್ ನೀಡಲಾಯಿತು.
134 ಪ್ರಕರಣದ 1714.682 ಗ್ರಾಂ ಬಂಗಾರ, 2737.9 ಗ್ರಾಂ ಬೆಳ್ಳಿ ಆಭರಣಗಳು, 16 ಮೋಟರ್ ಬೈಕ್ಗಳು, ಟ್ರ್ಯಾಕ್ಟರ್ ಬಿಡಿ ಭಾಗಗಳು, 178 ಕೆಜಿ ಅಡಿಕೆ, 3 ಮೊಬೈಲ್, ಒಟ್ಟು 2,31,650 ನಗದು ಹಣ ಮತ್ತು ಕೃಷಿ ಉಪಕರಣಗಳು ಸೇರಿ ಒಟ್ಟು 1,68,96,744 ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಕೊಡಲಾಯಿತು.
ಪಾಪರ್ಟಿ ಪೆರೇಡ್ ನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿ ಉಪಸ್ಥಿತಿಯಲ್ಲಿ, ಡಿವೈಎಸ್ ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ, ಪಿಐ ಲಿಂಗನಗೌಡ ನೆಗಳೂರ್, ಸಿಪಿಐಗಳಾದ ನಾಗರಾಜ್ , ಸತೀಶ್ , ಪಿಐಗಲಾದ ದೇವಾನಂದ, ಶ್ರೀನಿವಾಸ್ , ಸೋಮಶೇಖರ್ ಕೆಂಚಾರೆಡ್ಡಿ ಉಪ-ವಿಭಾಗದ ಎಲ್ಲಾ ಪಿಎಸ್ ಐಗಳು ಹಾಗೂ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.



