Connect with us

Dvgsuddi Kannada | online news portal | Kannada news online

ದಾವಣಗೆರೆ: ಜಪ್ತಿ ಮಾಡಿದ ವಾಹನ, ಚಿನ್ನ, ಬೆಳ್ಳಿ, ಅಡಿಕೆ, ಕೃಷಿ ಉಪಕರಣ ಸೇರಿ 84.47 ಲಕ್ಷ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸರು

IMG 20230726 201913

ದಾವಣಗೆರೆ

ದಾವಣಗೆರೆ: ಜಪ್ತಿ ಮಾಡಿದ ವಾಹನ, ಚಿನ್ನ, ಬೆಳ್ಳಿ, ಅಡಿಕೆ, ಕೃಷಿ ಉಪಕರಣ ಸೇರಿ 84.47 ಲಕ್ಷ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸರು

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಉಪ-ವಿಭಾಗದ ಈ ಪ್ರಾಪರ್ಟಿ ಪರೇಡ್‌ನಲ್ಲಿ ಜಪ್ತುಪಡಿಸಿಕೊಂಡಿರುವ 62 ಪ್ರಕರಣಗಳಲ್ಲಿನ 53 ವಾಹನಗಳು, 47,59000/- ರೂ ನಗದು ಹಣ, 14,15,000/ ರೂ ಮೌಲ್ಯದ ಸುಮಾರು 342 ಗ್ರಾಂ ತೂಕದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, 30,000/- ರೂ ಮೌಲ್ಯದ 3 ಮೊಬೈಲ್ ಹಾಗೂ 22,43,353/- ರೂ ಮೌಲ್ಯದ ಕೃಷಿ ಉಪಕರಣಗಳು, ಅಡಿಕೆ, ಬೋರವೆಲ್ ವೈರ್, ಮೋಟರ್ ಮತ್ತು ಇತರೆ ವಸ್ತುಗಳು ಒಟ್ಟು 84,47,353 ರೂ. ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ.

ದಿನಾಂಕ 26-07-2023 ರಂದು ಚನ್ನಗಿರಿ ಉಪ-ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 01-07-2022ರಿಂದ 30-06-2023 ರವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ, ಕಳುವಾಗಿದ್ದ ಮಾಲನ್ನು ಪತ್ತೆ
ಮಾಡಿ, ವಶಕ್ಕೆ ಪಡೆಯಲಾಗಿದೆ. ಈ ಸಂಬಂಧವಾಗಿ ಚನ್ನಗಿರಿ ಪಟ್ಟಣದ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು, ಅವುಗಳ ವಾರಸುದಾರರಿಗೆ ಪ್ರಾಪರ್ಟಿ ರಿಟರ್ನ್ ಪೆರೇಡ್ ಮೂಲಕ ಹಿಂತಿರುಗಿಸಲಾಯಿತು.

ಡಿವೈ.ಎಸ್.ಪಿ ಡಾ.ಸಂತೋಷ್ ಕೆ.ಎಂ ನೇತೃತ್ವದಲ್ಲಿ, ಸಿಪಿಐ ಮಹೇಶ್ ಈ.ಎಸ್. ಪಿಐ ಸಿದ್ದೇಗೌಡ, ಪಿಎಸ್ಐಗಳಾದ ಸೈಪುದ್ದೀನ್, ಶ್ರಪ್ರವೀಣ್ ಕುಮಾರ್, ರಮೇಶ್ , ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top