Connect with us

Dvgsuddi Kannada | online news portal | Kannada news online

ದಾವಣಗೆರೆ: ಫೇಸ್ ಬುಕ್ ಮೆಸೇಜ್ ನಂಬಿ; ಬರೋಬ್ಬರಿ 1.69 ಲಕ್ಷ ಕಳೆದುಕೊಂಡ ಭೂಪ

ದಾವಣಗೆರೆ

ದಾವಣಗೆರೆ: ಫೇಸ್ ಬುಕ್ ಮೆಸೇಜ್ ನಂಬಿ; ಬರೋಬ್ಬರಿ 1.69 ಲಕ್ಷ ಕಳೆದುಕೊಂಡ ಭೂಪ

ದಾವಣಗೆರೆ: ಫೇಸ್ ಬುಕ್ ನಲ್ಲಿ ಬಂದ ಜಾಬ್ ಮೆಸೇಜ್ ನಂಬಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು 1.69 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಜಿಲ್ಲೆಯ ಜಗಳೂರು ತಾಲ್ಲೂಕಿನ ನಿವಾಸಿ ಪ್ರದೀಪ್‌ಕುಮಾರ್ ಎಚ್.ಎಂ. ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಪ್ರದೀಪ್‌ಕುಮಾರ್ ಫೇಸ್‌ಬುಕ್ ನೋಡುತ್ತಿರುವಾಗ ಉದ್ಯೋಗಕ್ಕೆ ಸಂಪರ್ಕಿಸಿ ಎಂಬ ಸಂದೇಶದೊಂದಿಗೆ ಮೊಬೈಲ್‌ ನಂಬರ್ ಇತ್ತು. ಅದಕ್ಕೆ ಮೆಸೇಜ್ ಮಾಡಿದಾಗ ಮನೆಯಲ್ಲೇ ಕೆಲಸ ಎಂದು ಅಪರಿಚಿತ ವ್ಯಕ್ತಿ ವಾಟ್ಸಾಪ್ ಮೂಲಕ ಒಂದು ಲಿಂಕ್ ಕಳುಹಿಸಿದ್ದಾರೆ.

ಪ್ರದೀಪ್‌ಕುಮಾರ್ ಆ ಲಿಂಕ್ ಅನ್ನು ತೆರೆದಾಗ ಪ್ರಾಡೆಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ಆಮಿಷ ತೋರಿಸಿದ್ದಾರೆ. ಇದನ್ನು ನಂಬಿದ ಪ್ರದೀಪ್ ಅವರು ಕಳುಹಿಸಿದ ಲಿಂಕ್‌ನಿಂದ ಅಕೌಂಟ್ ಓಪನ್ ಮಾಡಿದ್ದಾರೆ. ಅವರು ಹೇಳಿದ ನಂಬರ್‌ಗೆ 300 ಕಳುಹಿಸಿದಾಗ ವಾಪಸ್‌ 638 ಬಂದಿದೆ. ಇದನ್ನು ನಂಬಿದ ಪ್ರದೀಪ್ ವಿವಿಧ ಹಂತಗಳಲ್ಲಿ 1.09 ಲಕ್ಷ ಹಾಗೂ ಪತ್ನಿಯ ಅಕೌಂಟ್‌ನಿಂದ 60 ಸಾವಿರ ಕಳುಹಿಸಿದ್ದಾರೆ. ನಂತರಯಾವುದೇ ಕಮಿಷನ್ ಬಾದರದಿದ್ದಾಗ ವಂಚನೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top