Connect with us

Dvgsuddi Kannada | online news portal | Kannada news online

ದಾವಣಗೆರೆ: 2 ಲಕ್ಷ ಸಾಲದ ಆಸೆಗೆ 1ಲಕ್ಷ ಕಳೆದುಕೊಂಡ ಕಿರಾಣಿ ಅಂಗಡಿ ವ್ಯಾಪಾರಿ..!

ದಾವಣಗೆರೆ

ದಾವಣಗೆರೆ: 2 ಲಕ್ಷ ಸಾಲದ ಆಸೆಗೆ 1ಲಕ್ಷ ಕಳೆದುಕೊಂಡ ಕಿರಾಣಿ ಅಂಗಡಿ ವ್ಯಾಪಾರಿ..!

ದಾವಣಗೆರೆ: ಬಜಾಜ್ ಫೈನಾನ್ಸ್ ಕಂಪನಿ ಅಧಿಕಾರಿ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, 2 ಲಕ್ಷ ಸಾಲ ಕೊಡುವುದಾಗಿ ಹೇಳಿದ್ದನ್ನು ನಂಬಿದ ಕಿರಾಣಿ ಅಂಗಡಿಯ ವ್ಯಾಪಾರಿ 1.04 ಲಕ್ಷ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಸಿಇಎನ್  ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ನಗರದ ವಿದ್ಯಾನಗರ ನಿವಾಸಿ ಕಿರಾಣಿ ಅಂಗಡಿ ವ್ಯಾಪಾರಿ ಉಮಾಶಂಕರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ಧಾರೆ. ಬಜಾಜ್ ಫೈನ್ ಅಧಿಕಾರಿ ಎಂದು ಅಪರಿತ ವ್ಯಕ್ತಿಯೊಬ್ಬರು ಉಮಾಶಂಕರ್ ಅವರಿಗೆ ಕರೆ ಮಾಡಿದ್ದರು. ನಿಮಗೆ 2 ಲಕ್ಷ ಸಾಲ ಕೊಡಲಾಗವುದು. ಇದಕ್ಕಾಗಿ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಜೊತೆ ಪ್ರೊಸೆಸಿಂಗ್ ಶುಲ್ಕವಾಗಿ 2.500 ಕಟ್ಟಬೇಕು ಎಂದು ಹೇಳಿದ್ದರು. ಇದಾದ ಬಳಿಕ ಇತರೆ ಶುಲ್ಕವಾಗಿ ಒಟ್ಟು 1.04 ಲಕ್ಷ ಹಣವನ್ನು ಕಿರಾಣಿ ಅಂಗಡಿ ವ್ಯಾಪಾರಿಯಿಂದ ಕಟ್ಟಿದ್ದಾರೆ. ಇದೀಗ ಸಾಲ ನೀಡಿದೆ ವಂಚನೆ ಮಾಡಿರುವುದಾಗಿ ಉಮಾಶಂಕರ್ ದೂರು ದಾಖಲಿಸಿದ್ಧಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top