Connect with us

Dvgsuddi Kannada | online news portal | Kannada news online

ದಾವಣಗೆರೆ: ಮಾಜಿ ಸಚಿವರ ಫಾರ್ಮ್ ಹೌಸ್ ನಲ್ಲಿ ಸಿಕ್ಕ ಜಿಂಕೆ, ಕೃಷ್ಣಮೃಗ ಸೇರಿ 30 ವನ್ಯಜೀವಿಗಳನ್ನು ಆನಗೋಡು ಮೃಗಾಲಯಕ್ಕೆ ಸ್ಥಳಾಂತರ

ದಾವಣಗೆರೆ

ದಾವಣಗೆರೆ: ಮಾಜಿ ಸಚಿವರ ಫಾರ್ಮ್ ಹೌಸ್ ನಲ್ಲಿ ಸಿಕ್ಕ ಜಿಂಕೆ, ಕೃಷ್ಣಮೃಗ ಸೇರಿ 30 ವನ್ಯಜೀವಿಗಳನ್ನು ಆನಗೋಡು ಮೃಗಾಲಯಕ್ಕೆ ಸ್ಥಳಾಂತರ

ದಾವಣಗೆರೆ: ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಕಲ್ಲೇಶ್ವರ ಮಿಲ್ ನ ಫಾರ್ಮ್ ಹೌಸ್ ನಲ್ಲಿ ಸಿಕ್ಕ ಜಿಂಕೆ, ಕೃಷ್ಣಮೃಗ ಸೇರಿ 30 ವನ್ಯಜೀವಿಗಳನ್ನು ಅರಣ್ಯ ಇಲಾಖೆ‌ ನ್ಯಾಯಾಲಯದ ನಿರ್ದೇಶನದಂತೆ ರಕ್ಷಣೆ ಮಾಡಿ ಆನಗೋಡು ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

7 ಜಿಂಕೆ, 11 ಕೃಷ್ಣಮೃಗ, 2 ನರಿ, 7 ಕಾಡುಹಂದಿ ಹಾಗೂ ಮುಂಗುಸಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗಿದೆ. ಡಾ. ಮಂಜುನಾಥ್ ನೇತೃತ್ವದಲ್ಲಿ ವನ್ಯ ಜೀವಿಗಳ ಆರೋಗ್ಯ ಪರಿಶೀಲಿಸಿ ಸ್ಥಳಾಂತರಿಸಲಾಗಿದೆ. ಕೃಷ್ಣಮೃಗ, ಜಿಂಕೆಗಳು ಸೂಕ್ಷ್ಮ ಪ್ರಾಣಿಗಳಾಗಿದ್ದರಿಂದ ಅವುಗಳನ್ನು ಬೊಮಾ ಮಾದರಿಯಲ್ಲಿ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top