ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ; 4,25 ಲಕ್ಷ ‌ಮೌಲ್ಯದ 10 ಬೈಕ್ ವಶ -ಆರೋಪಿ ಬಂಧನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಬೈಕ್ ಕಳ್ಳತನದ ಅರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 4,25 ಲಕ್ಷ ‌ಮೌಲ್ಯದ 10 ಬೈಕ್ ವಶಕ್ಕೆ‌ ಪಡೆಯಲಾಗಿದೆ.

ದಿನಾಂಕ 19.11.2022 ರಂದು ರಾತ್ರಿ ಸಮಯದಲ್ಲಿ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣಿಯ ಪಿ.ಎಸ್.ಐ ಮಂಜುಳಾ ಜಿ ಎ ಹಾಗೂ ಸಿಬ್ಬಂದಿಗಳನೊಳಗೊಂಡ ತಂಡ ನಿಟ್ಟುವಳ್ಳಿ ಲೆನಿನ್ ಸರ್ಕಲ್ ಪೊಲೀಸ್ ಕ್ವಾಟರ್ಸ್ ಬಳಿ ಆರೋಪಿ ಶಂಭನಗೌಡ @ ಶಂಭು, 51 ವರ್ಷ, ತರಗಾರ/ಕೂಲಿ ಕೆಲಸ ವಾಸ ನಿಟ್ಟುವಳ್ಳಿ ದಾವಣಗೆರೆ. ಸ್ವಂತ ಊರು ತಿಪ್ಲಾಸುರ ಗ್ರಾಮ ಬ್ಯಾಡಗಿ ತಾಲ್ಲೂಕು ಹಾವೇರಿ ಜಿಲ್ಲೆ, ಇತನನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರ ಮಾಡಿದ್ದಾಗ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಏಳು ಬೈಕ್ ಗಳನ್ನು ಹಾಗು ದಾವಣಗೆರೆ ಬಡಾವಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಮೂರು ಬೈಕ್ ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಒಟ್ಟು 4,25000/- ರೂ ಬೆಲೆಯ 10 ಬೈಕುಗಳನ್ನು ವಶಡಿಸಿಕೊಂಡಿರುತ್ತಾರೆ.

ಈ ಕಾರ್ಯಾಚಣೆಯಲ್ಲಿ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ ತಾಮ್ರಧ್ವಜ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಶಶಿಧರ ಯು ಜೆ ಹಾಗೂ ಸಂಚಾರ ಠಾಣೆ ನಿರೀಕ್ಷಕ ಅನಿಲಕುಮಾರರವರ ಮಾರ್ಗದರ್ಶನದಲ್ಲಿ ಕೆಟಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಹಾಗೂ  ಮಂಜುಳಾ ಜಿ ಎ ಹಾಗೂ ಪಿಎಸ್‌ಐ ಸಾಗರ ಅತ್ತರವಾಲಾ ಹಾಗೂ ಸಿಬ್ಬಂದಿಗಳಾದ ಎ ಎಸ್ ಐ ಜಯಪ್ಪ ಬಿ. ಎ ಎಸ್ ಐ ಈರಣ್ಣ ಜಿ, ಶಂಕರ್ ಜಾದವ್, ಪ್ರಕಾಶ ಟಿ., ಷಣ್ಮುಖ ಕೆ., ಎಮ್. ಮಂಜಪ್ಪ, ಶಿವರಾಜ್ ಎಮ್ ಎಸ್., ಹರೀಶ ಎನ್, ಮಾರುತಿ,  ಪುಷ್ಪ, ಕುಮಾರ ಡಿ.ಹೆಚ್‌., ರಾಜಶೇಖರ ನಾಯ್ಕ, ಹರೀಶ ನಾಯ್ಕ, ಪ್ರವೀಣ್ ಕುರಿ ಮತ್ತು ರಾಘವೇಂದ್ರ, ಶಾಂತರಾಜ ರವರಗಳು ಯಶಸ್ವಿಯಾಗಿರುತ್ತಾರೆ. ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಶ್ಲಾಘಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *