ಹರಿಹರ: ಸುಳ್ಳು ಸಾಲ ಸೃಷ್ಟಿಸಿ, ಬ್ಯಾಂಕ್ ಖಾತೆಯಿಂದ ಹಣ ಕಡಿತ ಪ್ರಕರಣವೊಂದರಲ್ಲಿ ಗ್ರಾಹಕರೊಬ್ಬರಿಗೆ ದಾವೆ ಖರ್ಚು 10 ಸಾವಿರ ಸೇರಿ, 60 ಸಾವಿರ ಪರಿಹಾರ ನೀಡುವಂತೆ ರಾಜ್ಯ ಗ್ರಾಹಕರ ಆಯೋಗವು ಬಜಾಜ್ ಫೈನಾನ್ಸ್ ಗೆ ಸೂಚಿಸಿದೆ.
ಹರಿಹರದ ಮೀನಾಕ್ಷಿ ಅವರು 2017ರ ಜೂನ್ ತಿಂಗಳಿನಲ್ಲಿ ಹರಿಹರದ ಟಿವಿ ಏಜೆನ್ಸಿಯಿಂದ ಬಜಾಜ್ ಫೈನಾನ್ಸ್ನ ಸಾಲ ಸೌಲಭ್ಯದಡಿ ಯುಪಿಎಸ್ ಖರೀದಿಸಿದ್ದರು. ಸಾಲದ ತಿಂಗಳ ಕಂತು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಮೂಲಕ ಜಮೆಯಾಗುತ್ತಿದ್ದವು. ಇದಲ್ಲದೆ ಮತ್ತೊಂದು ಸಾಲಕ್ಕೆ ಹಣ ಕಡಿತವಾಗ ತೊಡಗಿತ್ತು. ಇದು ಗೊತ್ತಾದ ತಕ್ಷಣ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು.ಇದನ್ನು ಪರಿಶೀಲಿಸಿದಾಗ ಬಜಾಜ್ ಫೈನಾನ್ಸ್ನ ಸ್ಥಳೀಯ ಸಿಬ್ಬಂದಿ ಮತ್ತು ಇತರರು ಶಾಮೀಲಾಗಿ ಮೀನಾಕ್ಷಿ ಅವರ ಹೆಸರಿನಲ್ಲಿ 73 ಸಾವಿರ ಮೊತ್ತದ ಮತ್ತೊಂದು ನಕಲಿ ಸಾಲ ಸೃಷ್ಟಿಸಿ, ಅದಕ್ಕೆ ಹಣ ಜಮೆ ಮಾಡಿಕೊಳ್ಳುತ್ತಿರುವುದು ಗೊತ್ತಾಯಿತು. ಇದರ ವಿರುದ್ಧ 2019ರ ಮಾರ್ಚ್ 22 ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ವೇಳೆ ಬಜಾಜ್ ಫೈನಾನ್ಸ್ ತಮ್ಮ ಕೆಲ ಸಿಬ್ಬಂದಿ ನಕಲಿ ಸಾಲ ಸೃಷ್ಟಿಸಿದ್ದನ್ನು ಒಪ್ಪಿಕೊಂಡಿತ್ತು. ರಾಜ್ಯ ಗ್ರಾಹಕರ ಆಯೋಗವು ಪರಿಹಾರ ಮೊತ್ತ ಸಾವಿರದಿಂದ 50 ಸಾವಿರ, ದಾವೆ ಖರ್ಚು 10 ಸಾವಿರ ನೀಡಬೇಕು. 60 ದಿನದೊಳಗೆ ಆದೇಶ ಪಾಲಿಸದಿದ್ದರೆ ದೂರು ದಾಖಲಿಸಿದ ದಿನದಿಂದ ಶೇ 6ರ ದರದಲ್ಲಿ ಬಡ್ಡಿ ಸೇರಿಸಿ ನೀಡಬೇಕು ಎಂದು ಸೂಚಿಸಿದೆ.



