Connect with us

Dvgsuddi Kannada | online news portal | Kannada news online

ದಾವಣಗೆರೆ: ಕಳ್ಳತನ ವೇಳೆ ಮನೆ ಮಾಲೀಕ ಎಚ್ಚರಗೊಂಡಿದ್ದರಿಂದ ಪಾರಾಗಲು ಹೋಗಿ ಮನೆ ಮೇಲಿಂದ ಹಾರಿ ಕಳ್ಳನೊರ್ವ ಸಾವು

death

ದಾವಣಗೆರೆ

ದಾವಣಗೆರೆ: ಕಳ್ಳತನ ವೇಳೆ ಮನೆ ಮಾಲೀಕ ಎಚ್ಚರಗೊಂಡಿದ್ದರಿಂದ ಪಾರಾಗಲು ಹೋಗಿ ಮನೆ ಮೇಲಿಂದ ಹಾರಿ ಕಳ್ಳನೊರ್ವ ಸಾವು

ದಾವಣಗೆರೆ: ಕಳ್ಳತನ ಮಾಡಲು ಬಂದಿದ್ದಾಗ ‌ಮನೆ ಮಾಲೀಕ ಎಚ್ಚರಗೊಂಡಿದ್ದರಿಂದ ಕಳ್ಳನೊರ್ವ ಪಾರಾಗಲು ಹೋಗಿ ಮನೆ ಮೇಲಿಂದ ಹಾರಿ ಮೃತಪಟ್ಟ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

 

 

ಕೆಟಿಜೆ ನಗರದ 3ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಪರಸಪ್ಪ (38) ಗುರುತಿಸಲಾಗಿದೆ. ಸಹಚರನೊಂದಿಗೆ ಕಳ್ಳತನ ಮಾಡಲು ಮನೆ ಹತ್ತಿದ್ದಾಗ ಮಾಲೀಕರಿಗೆ ಎಚ್ಚರವಾಗಿದೆ. ಮಾಲೀಕ ಜೋರಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಎಚ್ಚರವಾಗಿದ್ದಾರೆ. ಇದರಿಂದ ಭಯಗೊಂಡು ತಪ್ಪಿಸಿಕೊಳ್ಳಲು ಹೋಗಿ ಮನೆಯ ಮೇಲಿಂದ ಕೆಳಗೆ ಹಾರಿದ್ದಾನೆ. ಇದರಿಂದ ತೀವ್ರ ಪೆಟ್ಟಾಗಿದೆ. ಕೂಡಲೇ ಆತನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾನೆ. ಇನ್ನೋರ್ವ ಕಳ್ಳ ಸ್ಥಳದಿಂದ ಪಾರಾರಿ ಆಗಿದ್ದಾನೆ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸರು, ಎಸ್ ಪಿ ಸಿ.ಬಿ.ರಿಷ್ಯಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top