ದಾವಣಗೆರೆ: ಇ-ಸ್ವತ್ತು ಮಾಡಿಸಿಕೊಡಲು ರೈತರೊಬ್ಬರಿಂದ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ(PDO) ಭ್ರಷ್ಟಾಚಾರ ನಿಗ್ರಹ ದಳ (ACB) ಬಲೆಗೆ ಬಿದ್ದಿದ್ದಾರೆ.
ಕಕ್ಕರಗೊಳ್ಳ ಗ್ರಾಮ ಪಂಚಾಯತಿಯ ಪಿಡಿಒ ವಿಜಯ್ ಗೌಡ ಎಸಿಬಿಗೆ ಸಿಕ್ಕಿ ಬಿದ್ದ ಅಧಿಕಾರಿಯಾಗಿದ್ಧಾರೆ. ಇ-ಸ್ವತ್ತು ಮಾಡಿಸಿಕೊಡಲು ಯರಗುಂಟೆ ಗ್ರಾಮದ ಹಾಲೇಶಪ್ಪ ಎಂಬುವರಿಗೆ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಹಾಲೇಶಪ್ಪ ಎಸಿಬಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ವಿಜಯಗೌಡ ಲಂಚ ತೆಗೆದುಕೊಳ್ಳುವಾಗಲೇ ದಾಳಿ ಮಾಡಿದ್ಧಾರೆ.



