ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಾಕಿಯಿರುವ ಹದಿನೈದು ಕ್ಷೇತ್ರಗಳ ಪೈಕಿ ಇಂದು ಏಳು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಹಾಲಿ ಶಾಸಕ ಎಸ್. ರಾಮಪ್ಪಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹೊಸ ಮುಖ ನಂದಾಗವಿ ಶ್ರೀನಿವಾಸ್ ಈ ಸಲ ಅವಕಾಶ ಕಲ್ಪಿಸಲಾಗಿದೆ.
ನಾಮಪತ್ರ ಸಲ್ಲಿಕೆಗೆ ಕೇವಲ ಇನ್ನು ಎರಡು ದಿನಗಳು ಮಾತ್ರ ಉಳಿದಿದ್ದು ಶೀಘ್ರದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಬೇಕಿದೆ. ಇಂದು ಬಿಡುಗಡೆಯಾದ ಪಟ್ಟಿ ವಿವರ ಈ ರೀತಿ ಇದೆ.
- ಲಿಂಗಸೂಗೂರು – ದುರ್ಗಪ್ಪ ಎಸ್. ಹೂಲಗೇರಿ
- ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ್ ಶೆಟ್ಟರ್
- ಹುಬ್ಬಳ್ಳಿ ಧಾರವಾಡ ಪಶ್ಚಿಮ- ದೀಪಕ್ ಚಿಂಚೋರೆ
- ಶಿಗ್ಗಾಂವಿ- ಮೊಹಮ್ಮದ್ ಯೂಸುಫ್ ಸವಣೂರು
- ಹರಿಹರ – ನಂದಾಗವಿ ಶ್ರೀನಿವಾಸ್
- ಚಿಕ್ಕಮಗಳೂರು – ಹೆಚ್ ಡಿ. ತಮ್ಮಯ್ಯ
- ಶ್ರವಣಬೆಳಗೊಳ- ಎಂ. ಎ.ಗೋಪಾಲಸ್ವಾಮಿ



