Connect with us

Dvgsuddi Kannada | online news portal | Kannada news online

ದಾವಣಗೆರೆ: ತೆರೆದ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು

ಜಗಳೂರು

ದಾವಣಗೆರೆ: ತೆರೆದ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು

ದಾವಣಗೆರೆ: ನೀರು ತುಂಬಿದ್ದ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಮೃತಮಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕ ಅರಕೆರೆ ಹೊಸೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗರಾಜು ಅವರ ಪುತ್ರ ಪ್ರಜ್ವಲ್(11) ಮೃತ ಬಾಲಕನಾಗಿದ್ದಾನೆ.  ಸ್ನೇಹಿತರ ಜೊತೆ ದನ  ಮೇಯಿಸಲು ಹೋಗಿದ್ದ ವೇಳೆ,  ಎಲ್ಲರು ಸೇರಿ ತುಂಬಿದ್ದ ಕೃಷಿ ಹೊಂಡದಲ್ಲಿ ಈಜಾಡುತ್ತಿದ್ದರು. ಎಮ್ಮೆಯೊಂದಿಗೆ ಆಟವಾಡುತ್ತಿದ್ದ ಪ್ರಜ್ವಲ್ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಆತನ ಸ್ನೇಹಿತರು ಹೊಂಡದಿಂದ ಮೇಲೆ ಬಂದು ಕೂಗಿದ್ಧಾರೆ. ತಕ್ಷಣ ಅಲ್ಲಿದ್ದ ಗ್ರಾಮಸ್ಥರು ಕೃಷಿ ಹೊಂಡಕ್ಕಿಳಿದು ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಸರ್ಕಾರಿ ಆಸ್ಪತ್ರೆಯ ಮುಂದೆ ಪೋಷಕರ ಆಕ್ರಂದ ಮುಗಿಲು ಮುಟ್ಟಿತ್ತು. ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ  ಪ್ರಜ್ವಲ್ ಮನೆ ದನಗಳನ್ನು  ಮಯಿಸಲು ಹೋಗಿದ್ದರಿಂದ ಈ ಅವಘಡ ಸಂಭವಿಸಿದದೆ.  ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜಗಳೂರು

Advertisement

ದಾವಣಗೆರೆ

Advertisement
To Top