Connect with us

Dvgsuddi Kannada | online news portal | Kannada news online

ದಾವಣಗೆರೆ: ತುಮ್ಕೋಸ್ ನೂತನ ಅಧ್ಯಕ್ಷರಾಗಿ ಎಚ್. ಎಸ್. ಶಿವಕುಮಾರ್ ಅವಿರೋಧ ಆಯ್ಕೆ

Channagiri tumcos

ಚನ್ನಗಿರಿ

ದಾವಣಗೆರೆ: ತುಮ್ಕೋಸ್ ನೂತನ ಅಧ್ಯಕ್ಷರಾಗಿ ಎಚ್. ಎಸ್. ಶಿವಕುಮಾರ್ ಅವಿರೋಧ ಆಯ್ಕೆ

ದಾವಣಗೆರೆ: ರಾಜ್ಯ ಅಡಿಕೆ‌ ( arecanut) ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆ ಪಡೆದಿರುವ ಜಿಲ್ಲೆಯ ಚನ್ನಗಿರಿಯ ತೋಟ ಉತ್ಪನ್ನಗಳ ಮಾರಾಟ‌‌ ಸಹಕಾರಿ ಸಂಘ ‌(ತುಮ್ಕೋಸ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎಚ್.ಎಸ್.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಾವಣಗೆರೆ: ಮನೆಕಳ್ಳತನ ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಆರೋಪಿ ಬಂಧನ; 5.50 ಲಕ್ಷ ಮೌಲ್ಯದ ಸ್ವತ್ತು ವಶ‌

ಶಿವಕುಮಾರ್ ಅವರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ತುಮ್ಕೋಸ್ ಆವರಣದಲ್ಲಿ ನೆರೆದಿದ್ದ ಶಿವಕುಮಾರ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಸಿ ಸಿಹಿ ಹಂಚಿದರು.ಶಿವಕುಮಾರ್‌ ಅವರ ಹೆಸರನ್ನು ನಿರ್ದೇಶಕರಾದ ಟಿ.ವಿ. ರಾಜು ಹಾಗೂ ಎಚ್.ಎಸ್. ಮಂಜುನಾಥ್ ಅನುಮೋದಿಸಿದರು. ಎಚ್. ಎಸ್ . ಶಿವಕುಮಾರ್ ಅವರು  ಮುಂದಿನ 5 ವರ್ಷಗಳ ಅವಧಿಗೆ ತುಮ್ಕೋಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುಳಾ ಘೋಷಿಸಿದರು.

ಮಾ.22ರಿಂದ ಎರಡ್ಮೂರು ದಿನ ಗುಡುಗು ಸಹಿತ ಮಳೆ‌ ಮುನ್ಸೂಚನೆ

ನೂತನವಾಗಿ ಆಯ್ಕೆಯಾದ 15 ನಿರ್ದೇಶಕರಿಗೂ ಪ್ರಮಾಣ ಪತ್ರವನ್ನು ವಿತರಿಸಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಶಿವಕುಮಾರ್ ಮೂರನೇ ಬಾರಿಗೆ ತುಮ್ಕೋಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂದಿನ ರಾಶಿ ಭವಿಷ್ಯ

ತುಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಮಧು, ನಿರ್ದೇಶಕರಾದ ಟಿ.ವಿ. ರಾಜು, ಎಂ.ಎನ್. ಗಂಗಾಧರಪ್ಪ, ವಿಜಯಕುಮಾರ್ ಗೌಡ್ರು, ಎನ್. ಲೋಕೇಶ್ವರಪ್ಪ, ಎಲ್.ವಿ. ಶೋಭಾ, ಮೀನಾಕ್ಷಿ, ಚನ್ನಬಸಪ್ಪ, ರಘು ಎಸ್. ನಾಯ್ಕ, ಎಚ್.ಎಸ್. ಮಂಜುನಾಥ್ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top