ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾದಾಪುರ ಗ್ರಾಮದ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಬೆಂಕಿ ಬುದ್ದಿದ್ದು 20 ಲಕ್ಷ ಮೌಲ್ಯದ ಉಪಕರಣಗಳು ಸುಟ್ಟು ಭಸ್ಮವಾಗಿವೆ.
ಗ್ರಾಮದ ಗಂಗಾಧರ ಅವರು ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕ ಸ್ಥಾಪಿಸಿದ್ದರು. ಏಕಾಏಕಿಬೆಂಕಿ ಬಿದ್ದಿದೆ. ಘಟಕದಲ್ಲಿದ್ದ 20 ಲಕ್ಷ ಮೌಲ್ಯದ ಉಪಕರಣಗಳು, ಅಡಿಕೆ ತಟ್ಟೆಗಳು ಸುಟ್ಟಿವೆ. ಅಡಿಕೆ ಹಾಳೆ ಇದ್ದ ಕಾರಣ ಬೆಂಕಿಯ ಜ್ವಾಲೆಗಳು ಎಲ್ಲೆಡೆ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಚನ್ನಗಿರಿಯ 2, ದಾವಣಗೆರೆಯ 1 ಹಾಗೂ ಹೊಳಲ್ಕೆರೆಯಿಂದ 1 ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆಸಿ ಬೆಂಕಿ ನಂದಿಸಿವೆ.



