ದಾವಣಗೆರೆ: ಭದ್ರಾ ಡ್ಯಾಂನ ಬಲ ಮತ್ತು ಎಡ ದಂಡೆ ಕಾಲುವೆಗಳಿಗೆ ಸತತ 100 ದಿನನೀರು ಹರಿಸುವ ವಿಚಾರವಾಗಿ ಬೆಂಗಳೂರಿನಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಗೃಹ ಕಚೇರಿಯಲ್ಲಿ ದಾವಣಗೆರೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಿದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಈ ಹಿಂದೆ ನಿರ್ಧರಿಸಿದ್ದಂತೆ 100 ದಿನ ಸತತವಾಗಿ ನೀರು ಬಿಡಬೇಕು. ಡ್ಯಾಂ ನೀರು ನಂಬಿಕೊಂಡು, ಅಚ್ಚುಕಟ್ಟು ರೈತರು ಭತ್ತ ನಾಟಿ ಮಾಡಿದ್ದು, ಅಚ್ಚುಕಟ್ಟು ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು ಎಂದು ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರ ನೇತೃತ್ವದಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲೆಯ ಶಾಸಕರಾದ ಹೊನ್ನಾಳಿ ಡಿ.ಜಿ.ಶಾಂತನಗೌಡ, ಹರಿಹರಬಿ.ಪಿ.ಹರೀಶ, ಮಾಯಕೊಂಡ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಿವಗಂಗಾ ವಿ.ಬಸವರಾಜ, ಜಗಳೂರು ಬಿ.ದೇವೇಂದ್ರಪ್ಪ, ಹರಪನಹಳ್ಳಿ ಶಾಸಕರು, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ನೀರಾವರಿ ಇಲಾಖೆ, ನಿಗಮದ ಅಧಿಕಾರಿಗಳು ಇದ್ದರು.
ದಾವಣಗೆರೆ: ಸೆ. 20 ರಿಂದ ಮುಂದಿನ 3 ತಿಂಗಳ ಡಿಎಲ್ ಸ್ಲಾಟ್ ಓಪನ್; ಬೇಕಾದ ದಿನಾಂಕ ಇಂದೇ ಕಾಯ್ದಿರಿಸಿಕೊಳ್ಳಿ…!
ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಸೆ.21ರಂದು ಉದ್ಯೋಗ ಮೇಳ
ದಾವಣಗೆರೆ; ಕಾಲೇಜು ಹುಡುಗಿಯರನ್ನು ರೇಗಿಸುತ್ತಿದ್ದ ಯುವಕನಿಗೆ ನಡು ರಸ್ತೆಯಲ್ಲಿಯೇ ಬಿತ್ತು ಧರ್ಮದೇಟು..!



