Connect with us

Dvgsuddi Kannada | online news portal | Kannada news online

ದಾವಣಗೆರೆ: ಕೊನೆ ಭಾಗದ ರೈತರಿಗೆ‌ ತಲುಪದ ಭದ್ರಾ ನಾಲೆಯ ನೀರು; ನಾಲೆಗೆ ಅಳವಡಿಸಿದ್ದ ಅಕ್ರಮ ಪಂಪ್ ಸೆಟ್ ತೆರವು

IMG 20240125 145216

ದಾವಣಗೆರೆ

ದಾವಣಗೆರೆ: ಕೊನೆ ಭಾಗದ ರೈತರಿಗೆ‌ ತಲುಪದ ಭದ್ರಾ ನಾಲೆಯ ನೀರು; ನಾಲೆಗೆ ಅಳವಡಿಸಿದ್ದ ಅಕ್ರಮ ಪಂಪ್ ಸೆಟ್ ತೆರವು

ದಾವಣಗೆರೆ: ಭದ್ರಾ ಜಲಾಶಯದ ಕೊನೆ ಭಾಗಕ್ಕೆ ನೀರು‌ ತಲುಪದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆಂಬ ದೂರು ದೂರು ಬಂದ ಹಿನ್ನೆಲೆ ನಾಲೆಗೆ ಅಕ್ರಮವಾಗಿ ಅಳವಡಿಸಿದ್ದ 30 ಪಂಪ್‌ಸೆಟ್‌ಗಳನ್ನು ಮಲೇಬೆನ್ನೂರು ವಿಭಾಗದ ಬೆಸ್ಕಾಂ, ಪೊಲೀಸ್‌, ಕಂದಾಯ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಚನ್ನಗಿರಿ, ಹೊನ್ನಾಳಿ ತಾಲ್ಲೂಕಿನ ಗಡಿಯವರೆಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ನೇರವಾಗಿ ಭದ್ರಾ ನಾಲೆಗೆ ಪಂಪ್‌ಸೆಟ್‌ ಅಳವಡಿಸಿರುವುದರಿಂದ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ದೊರೆತಯತ್ತಿಲ್ಲ‌‌ ಎಂದು ರೈತರ ದೂರಿದ್ದರು. ತೋಟದ ಬೆಳೆಗಳು ನೀರಿಲ್ಲದೇ ಒಣಗುತ್ತಿರುವುದರಿಂದ ಹಾಯಿಸಿಕೊಳ್ಳುತ್ತಿದ್ದೇವೆಂದ ರೈತರು ಹೇಳಿದರು. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ, ಅಕ್ರಮವಾಗಿ ಪಂಪ್‌ಸೆಟ್‌ ಅಳವಡಿಸಬಾರದು ಎಂದು ನೀರಾವರಿ ಇಲಾಖೆಯ ಮಲೇಬೆನ್ನೂರು ವಿಭಾಗದ ಇಂಜಿನಿಯರ್ ರೈತರಿಗೆ ಸೂಚಿಸಿದರು.

ಬೆಸ್ಕಾಂ ಶಾಖಾಧಿಕಾರಿ ನಾಗರಾಜನಾಯ್ಕ್‌, ಎಸ್‌ಐ ಎಚ್.ಕೆ. ವೀಣಾ, ಕಂದಾಯ ನಿರೀಕ್ಷಕ ಎಸ್‌.ಎನ್‌. ಬಸಣ್ಣ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್‌ ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top