Connect with us

Dvgsuddi Kannada | online news portal | Kannada news online

ಸಂತೇಬೆನ್ನೂರಿನ ತಣಿಗೆರೆ ಗ್ರಾಮದಲ್ಲಿ ಅಡಿಕೆ ಸಸಿ  ಹಚ್ಚಿ ಎರಡೇ ವರ್ಷಕ್ಕೆ ಹೊಂಬಾಳೆ

vishwanth 1

ದಾವಣಗೆರೆ

ಸಂತೇಬೆನ್ನೂರಿನ ತಣಿಗೆರೆ ಗ್ರಾಮದಲ್ಲಿ ಅಡಿಕೆ ಸಸಿ  ಹಚ್ಚಿ ಎರಡೇ ವರ್ಷಕ್ಕೆ ಹೊಂಬಾಳೆ

ದಾವಣಗೆರೆ:  ಸಾಮಾನ್ಯವಾಗಿ ಅಡಿಕೆ ಸಸಿ ಹಚ್ಚಿ ನಾಲ್ಕು ವರ್ಷಕ್ಕೆ ಅಡಿಕೆ ಹೊಂಬಾಳೆ ಬಿಡುವುದನ್ನು ನೋಡಿದ್ದೇವೆ. ಆದರೆ, ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದ ವಿಶ್ವನಾಥ್  ದೊಡ್ಮನೆ ಎಂಬುವರ ತೋಟದಲ್ಲಿ 2 ವರ್ಷದ ಅಡಿಕೆ ಸಸಿಯಲ್ಲಿ ಹೊಂಬಾಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

ರಾಸಾಯನಿಕ ಗೊಬ್ಬರ, ಕಳೆನಾಶಕ  ಇಲ್ಲದೇ ಸಾವಯವ ಗೊಬ್ಬರ ಬಳಸಿ ಅಡಿಕೆ ಬೆಳೆಯಲಾಗಿದ್ದು,  12 ಎಕರೆಯಲ್ಲಿ ಅಡಿಕೆ ಸಸಿ ಹಚ್ಚಿದ್ದಾರೆ. ನಾವೇ ಅಡಿಕೆ ಗೋಟು ತಂದು ಸಸಿ ಮಾಡಿ, ಹಾಕಿದ್ದೇವೆ. ಎಲ್ಲ ಸಸಿ ಉತ್ತಮವಾಗಿ ಬೆಳೆದಿದ್ದು, ಎರಡೇ ವರ್ಷಕ್ಕೆ ಹೊಂಬಾಳೆ  ಬಿಟ್ಟಿರುವುದು ನಮಗೂ ಅಚ್ಚರಿ ಮೂಡಿಸಿದೆ. ಸಮಯಕ್ಕೆ ಸರಿಯಾಗಿ ನೀರು ಬಿಟ್ಟರೆ , ಮತ್ತೇನನ್ನು ನೀಡಿಲ್ಲ ಎನ್ನುತ್ತಾರೆ ವಿಶ್ವನಾಥ್ ದೊಡ್ಮನೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top