Connect with us

Dvgsuddi Kannada | online news portal | Kannada news online

ಯುವ ರೈತರಿಗೆ ಸುವರ್ಣಾವಕಾಶ: ಕುರಿ, ಕೋಳಿ, ಮೇಕೆ ಸಾಕಣಿಕೆ ಕುರಿತು ಏ.5 ರಿಂದ 30ರವೆಗೆ ತರಬೇತಿ

ದಾವಣಗೆರೆ

ಯುವ ರೈತರಿಗೆ ಸುವರ್ಣಾವಕಾಶ: ಕುರಿ, ಕೋಳಿ, ಮೇಕೆ ಸಾಕಣಿಕೆ ಕುರಿತು ಏ.5 ರಿಂದ 30ರವೆಗೆ ತರಬೇತಿ

ದಾವಣಗೆರೆ:  ಯುವ ರೈತರಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಏಪ್ರಿಲ್-ತಿಂಗಳ ಪೂರ್ತಿ  ಕುರಿ, ಕೋಳಿ, ಮೇಕೆ ಸಾಕಣಿಕೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯು ಏ.05 ರಿಂದ 06 ರವರೆಗೆ ಆಧುನಿಕ ಹೈನುಗಾರಿಕೆ. ಏ.07 ರಿಂದ 08 ರವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ. ಏ.11 ರಿಂದ 12 ರವರೆಗೆ ಕೋಳಿ ಸಾಕಾಣಿಕೆ. ಏ.21 ರಿಂದ 22 ರವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ. ಏ.25 ರಿಂದ 26 ರವರೆಗೆ ಆಧುನಿಕ ಹೈನುಗಾರಿಕೆ. ಏ.27 ರಿಂದ 28 ಕುರಿ ಮತ್ತು ಮೇಕೆ ಸಾಕಾಣಿಕೆ. ಏ.29 ರಿಂದ ಏ.30 ರವರೆಗೆ ಆಧುನಿಕ ಹೈನುಗಾರಿಕೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರತಿ ವಿಷಯದಲ್ಲಿಯೂ ತಲಾ 25 ಜನರಿಗೆ ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ, ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ತರಬೇತಿದಾರರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯಕೀಯ ತರಬೇತಿ ಕೇಂದ್ರ ದೂರವಾಣಿ ಸಂಖ್ಯೆ 08192-233787 ಗೆ ಸಂಪರ್ಕಿಸಬಹುದು ಎಂದು ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top