Connect with us

Dvgsuddi Kannada | online news portal | Kannada news online

ದಾವಣಗೆರೆ: ಮಳೆಯಿಂದ ಹಾನಿಗೊಳಗಾದ ಎಲೆಬಳ್ಳಿ ಬೆಳೆ ಚೇತರಿಕೆಗೆ ತೋಟಗಾರಿಕೆ ತಜ್ಞ ಬಸವನಗೌಡರ ಸಲಹೆ

ದಾವಣಗೆರೆ

ದಾವಣಗೆರೆ: ಮಳೆಯಿಂದ ಹಾನಿಗೊಳಗಾದ ಎಲೆಬಳ್ಳಿ ಬೆಳೆ ಚೇತರಿಕೆಗೆ ತೋಟಗಾರಿಕೆ ತಜ್ಞ ಬಸವನಗೌಡರ ಸಲಹೆ

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕು ರಾಮತೀರ್ಥ ಮತ್ತು ನಾಗೇನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಸುರಿದ‌ ಭಾರೀ ಮಳೆಯಿಂದ ಹಾನಿಗೀಡಾದ ಎಲೆ ಬಳ್ಳಿ ತಾಕುಗಳಿಗೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಭೇಟಿ ನೀಡಿ, ಬೆಳೆ  ಚೇತರಿಕೆಗೆ ಸಲಹೆ‌ ನೀಡಿದರು.

ನೀರು ಬಸಿದಿರುವ ತೋಟದಲ್ಲಿ Copper Oxy Chloride 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಬುಡಕ್ಕೆ ಹಾಕಬೇಕು. ಒಂದು ವಾರದ ನಂತರ Ridomyl gold 3g+ ಲಘು ಪೋಷಕಾಂಶ ದ ಮಿಶ್ರಣ 5 ಮಿಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅತಿಯಾಗಿ ನೀರು ನಿಂತಿದ್ದರೆ ಬಸಿಗಾಲುವೆಗಳ ಮೂಲಕ ನೀರನ್ನು ಹೊರಹಾಕಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಜಿ.ಸಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾ ಜಿ.ಪಿ, ಸಸ್ಯ ಸಂರಕ್ಷಣಾ ತಜ್ಞ ಅವಿನಾಶ್, ತೋಟಗಾರಿಕ ಅಧಿಕಾರಿ ಸುನಿಲ್ ಮತ್ತು ರೈತರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top