ದಾವಣಗೆರೆ: ಕೃಷಿ ಇಲಾಖೆ (agriculture department) ಮೂಲಕ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ (irrigation sprinkler) ಯೋಜನೆಯಡಿ ಸ್ಪ್ರಿಂಕ್ಲೇರ್ ಸೆಟ್ ಗೆ (sprinkler set) ಸರ್ಕಾರದ ಸಹಾಯಧನದಲ್ಲಿ (subsidy) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟಜಾತಿ ಫಲಾನುಭವಿಗಳು ಈ ಹಿಂದೆ ಪರಿಕರ ತೆಗೆದುಕೊಂಡಿದ್ದರೂ ಸಹ 3-21 ಎಕರೆಗಿಂತ ಹೆಚ್ಚಿರುವರು ಇನ್ನೊಂದು ಘಟಕಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಸಬಾ ದೂ.ಸಂ: 8277931143, 9743056797,ಆನಗೋಡು ದೂ.ಸಂ: 8277931137,9148382913, ಮಾಯಕೊಂಡ ದೂ.ಸಂ: 8277931136,9620282104 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.



