ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿ ಕಾರು-ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆ ಮೂಲದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ರಿಯಲ್ ಎಸ್ಟೇಟ್ ಸಕ್ರಿಯರಾಗಿದ್ದ ಪ್ರತಾಪ್ ಪವಾರ್ ಮೃತ ವ್ಯಕ್ತಿ. ಪತ್ನಿ ಹಾಗೂ ಮಕ್ಕಳೊಂದಿಗೆ ಮೈಸೂರಿನ ಚಾಮುಂಡೇಶ್ವರಿ
ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕಡೂರು ಬೈಪಾಸ್ನಲ್ಲಿ ಪವಾರ್ ಕಾರಿಗೆ ತೈಲ ತುಂಬಿದ ಟ್ಯಾಂಕ ಲಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪ್ರತಾಪ್ ಸ್ಥಳದಲ್ಲೆಯೇ ಸಾ*ವನ್ನಪ್ಪಿದ್ದಾರೆ. ಪತ್ನಿ ಸೂಫಿಯಾ ಮತ್ತು
ಮಗನಿಗೆ ಗಂಭೀರ ಗಾಯಗಳಾಗಿವೆ.



