Connect with us

Dvgsuddi Kannada | online news portal | Kannada news online

ಹೊನ್ನಾಳಿಯಲ್ಲಿ ಮತ್ತೊಂದು ಭೀಕರ ಕಾರು ಅಘಾತ; ಹಳ್ಳಕ್ಕೆ ಬಿದ್ದ ಕಾರು-ಎಎಸ್ ಐ ಪುತ್ರ ಸಾವು

IMG 20221127 115827

ದಾವಣಗೆರೆ

ಹೊನ್ನಾಳಿಯಲ್ಲಿ ಮತ್ತೊಂದು ಭೀಕರ ಕಾರು ಅಘಾತ; ಹಳ್ಳಕ್ಕೆ ಬಿದ್ದ ಕಾರು-ಎಎಸ್ ಐ ಪುತ್ರ ಸಾವು

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾಸಡಿ ಬಳಿ ಮತ್ತೊಂದು ಭೀಕರ ಕಾರು ಅಪಘಾತ ಸಂಭವಿಸಿದೆ. ಕಾರು ಚಾಲನೆ ಮಾಡುತ್ತಿದ್ದ ಚಂಬಪ್ಪ ಪ್ರಕಾಶ್ (28) ಸಾವನ್ನಪ್ಪಿದ್ದಾರೆ

ಬೆಳಗಾವಿಯ ಬಸವನಕುಡುಚಿ ಪೊಲೀಸ್ ಠಾಣೆಯ ಚಂಬಪ್ಪ ಬಸವಣ್ಯೆಪ್ಪ ಪುತ್ರ ಪ್ರಕಾಶ್ ಸಾವನ್ನಪ್ಪಿದ್ದಾರೆ. ಬೆಳಗಾವಿಯಿಂದ ಶಿವಮೊಗ್ಗಕ್ಕೆ ಸ್ನೇಹಿತನನ್ನು ಬಿಟ್ಟು ಬರುವುದಾಗಿ ಹೇಳಿ ಪ್ರಕಾಶ್ ಕಾರು ತೆಗೆದುಕೊಂಡು ಬಂದಿದ್ದನು. ಸ್ನೇಹಿತನನ್ನು ಬಿಟ್ಟು ಬೆಳಗಾವಿಗೆ ಹೊರಡುವಾಗ ಶಿವಮೊಗ್ಗ- ಹರಿಹರ ರಸ್ತೆಯ ಹೊನ್ನಾಳಿಯ ಸಮೀಪದ ಮಾಸಡಿ ಗ್ರಾಮದ ಹಳ್ಳದ ಬಳಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರನ್ನು ಮೇಲಕ್ಕೆ ಎತ್ತಲಾಗಿದ್ದು, ಕಾರಿನ ಹಿಂಭಾಗ ಜಖಂಗೊಂಡಿದೆ. ತನ್ನ ಮಗನ ದೇಹದ ಮೇಲೆ ಗಾಯಗಳಾಗಿವೆ ಎಂದು ಎಎಸ್ ಐ ಚಂಬಪ್ಪ ಬಸವಣ್ಯೆಪ್ಪ ದೂರು ನೀಡಿದ್ದಾರೆ. ಈ ಹಿಂದೆ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರು ಸಾವಿನ ಪ್ರಕರಣ‌ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top