Connect with us

Dvgsuddi Kannada | online news portal | Kannada news online

ದಾವಣಗೆರೆ; ಉಚಿತ ಸಾಮೂಹಿಕ ವಿವಾಹ,ಉಪನಯನ; ನೋಂದಣಿಗೆ ಮೇ1ರವರೆಗೆ ಅವಕಾಶ

GWCAAAAAElFTkSuQmCC 1

ದಾವಣಗೆರೆ

ದಾವಣಗೆರೆ; ಉಚಿತ ಸಾಮೂಹಿಕ ವಿವಾಹ,ಉಪನಯನ; ನೋಂದಣಿಗೆ ಮೇ1ರವರೆಗೆ ಅವಕಾಶ

ದಾವಣಗೆರೆ: ನಗರದ ದೈವಜ್ಞ ದಿವ್ಯ ಜ್ಯೋತಿ ಮಿತ್ರ ಮಂಡಳಿ ವತಿಯಿಂದ ಮೇ.11ರಂದು ದೈವಜ್ಞ ಸಮಾಜ ಬಾಂಧವರಿಗೆ 23 ನೇ ವರ್ಷದ ಉಚಿತ ಸಾಮೂಹಿಕ ವಿವಾಹ,ಉಪನಯನ ಕಾರ್ಯಕ್ರಮಗಳನ್ನು ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಸಂಸ್ಥಾಪಕರಾದ ಹೆಚ್.ಜಿ. ಹನುಮಂತರಾವ್ ಪಾಲನಕರ್ ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಮಾಜದ ಬಡ ಕುಟುಂಬದ ವಟುಗಳು ಹಾಗೂ ವಧುವರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಡಳಿ ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಳೆದ ವರ್ಷ 25 ವಟುಗಳು ಅವಕಾಶ ಸದುಪಯೋಗ ಪಡಿಸಿಕೊಂಡಿದ್ದು, ಈ ಬಾರಿಯೂ ಹೆಚ್ಚಿನ ಬಾಂಧವರು ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಮಂಡಳಿ ಅಧ್ಯಕ್ಷ ವಿಮಲೇಶ್ವರ್ ಜಿ. ರೇವಣಕರ್ ಮಾತನಾಡಿ, ಉಪನಯ ಹಾಗೂ ವಿವಾಹ ಮಾಡಿಕೊಳ್ಳಲು ಇಚ್ಛಿಸುವವರು ಮೇ.1ರೊಳಗೆ ನೋಂದಾಯಿಸಲು ಅವಕಾಶವಿದೆ. ಮಂಡಳಿಯ ಸಂಸ್ಥಾಪಕ ಹನುಮಂತರಾವ್ ಜಿ. ಪಾಲನಕರ್ ಮೊ: 7899881161,ವಿಶ್ವೇಶ್ವರ ಜಿ. ರೇವಣಕರ್ ಮೊ: 9448929964 ಸಂಪರ್ಕಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎ. ವೆರ್ಣೇಕರ್, ಗುರುನಾಥ್ ಡಿ. ಪಾಲನಕರ್, ಮೂರ್ತಿ ಜಿ. ಕುಡ್ತಕರ್ ಇನ್ನಿತರರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top