ದಾವಣಗೆರೆ: ನಗರದ ದೈವಜ್ಞ ದಿವ್ಯ ಜ್ಯೋತಿ ಮಿತ್ರ ಮಂಡಳಿ ವತಿಯಿಂದ ಮೇ.11ರಂದು ದೈವಜ್ಞ ಸಮಾಜ ಬಾಂಧವರಿಗೆ 23 ನೇ ವರ್ಷದ ಉಚಿತ ಸಾಮೂಹಿಕ ವಿವಾಹ,ಉಪನಯನ ಕಾರ್ಯಕ್ರಮಗಳನ್ನು ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಸಂಸ್ಥಾಪಕರಾದ ಹೆಚ್.ಜಿ. ಹನುಮಂತರಾವ್ ಪಾಲನಕರ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಮಾಜದ ಬಡ ಕುಟುಂಬದ ವಟುಗಳು ಹಾಗೂ ವಧುವರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಡಳಿ ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಳೆದ ವರ್ಷ 25 ವಟುಗಳು ಅವಕಾಶ ಸದುಪಯೋಗ ಪಡಿಸಿಕೊಂಡಿದ್ದು, ಈ ಬಾರಿಯೂ ಹೆಚ್ಚಿನ ಬಾಂಧವರು ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಮಂಡಳಿ ಅಧ್ಯಕ್ಷ ವಿಮಲೇಶ್ವರ್ ಜಿ. ರೇವಣಕರ್ ಮಾತನಾಡಿ, ಉಪನಯ ಹಾಗೂ ವಿವಾಹ ಮಾಡಿಕೊಳ್ಳಲು ಇಚ್ಛಿಸುವವರು ಮೇ.1ರೊಳಗೆ ನೋಂದಾಯಿಸಲು ಅವಕಾಶವಿದೆ. ಮಂಡಳಿಯ ಸಂಸ್ಥಾಪಕ ಹನುಮಂತರಾವ್ ಜಿ. ಪಾಲನಕರ್ ಮೊ: 7899881161,ವಿಶ್ವೇಶ್ವರ ಜಿ. ರೇವಣಕರ್ ಮೊ: 9448929964 ಸಂಪರ್ಕಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎ. ವೆರ್ಣೇಕರ್, ಗುರುನಾಥ್ ಡಿ. ಪಾಲನಕರ್, ಮೂರ್ತಿ ಜಿ. ಕುಡ್ತಕರ್ ಇನ್ನಿತರರಿದ್ದರು.



