Connect with us

Dvgsuddi Kannada | online news portal | Kannada news online

ದಾವಣಗೆರೆ: ನಗರದ ಹವಾಮಾನ ಬದಲಾವಣೆ ಕುರಿತು ಸ್ಮಾರ್ಟ್ ಸಿಟಿ ಛಾಯಾಗ್ರಹಣ ಸ್ಪರ್ಧೆ; ಪ್ರಥಮ ಬಹುಮಾನ 10 ಸಾವಿರ..!

ದಾವಣಗೆರೆ

ದಾವಣಗೆರೆ: ನಗರದ ಹವಾಮಾನ ಬದಲಾವಣೆ ಕುರಿತು ಸ್ಮಾರ್ಟ್ ಸಿಟಿ ಛಾಯಾಗ್ರಹಣ ಸ್ಪರ್ಧೆ; ಪ್ರಥಮ ಬಹುಮಾನ 10 ಸಾವಿರ..!

ದಾವಣಗೆರೆ: ಸ್ವಾತ್ರಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಆಶಯದಂತೆ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ದಾವಣಗೆರೆ ನಗರದಲ್ಲಿ ಛಾಯಾಗ್ರಹಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನಗರಗಳಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆ ಮತ್ತು ಪರಿಣಾಮಗಳ ಕುರಿತು ನಗರಗಳಲ್ಲಿನ ಹವಾಮಾನದ ಪರಿಣಾಮಗಳು ಮತ್ತು ನಗರಗಳಲ್ಲಿನ ಹವಾಮಾನ ಕ್ರಮಗಳು.ಎರಡು ವಿಭಾಗಗಳಲ್ಲಿ ಛಾಯಾಚಿತ್ರಗಳನ್ನು ಸಲ್ಲಿಸಬಹುದು. ಈ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಲು ಮಾ.15 ರವರೆಗೆ ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ದಾವಣಗೆರೆ ನಗರದ ನಾಗರೀಕರು, ಯುವಜನತೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪುಗಾರರ ಮೂಲಕ ಆಯ್ಕೆಯಾದ ವಿಜೇತರಿಗೆ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಬಹುಮಾನಗಳನ್ನು ನೀಡಲಾಗುತ್ತದೆ. ಮೊದಲನೇ ಬಹುಮಾನ ರೂ. 10,000, ದ್ವಿತೀಯ ಬಹುಮಾನ ರೂ.5,000, ತೃತೀಯ ಬಹುಮಾನ ರೂ.3,000 ಗಳಾಗಿರುತ್ತದೆ.

ಛಾಯಾಚಿತ್ರಗಳನ್ನು ವಿವರಣೆಯೊಂದಿಗೆ smartcitydavanagere@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದೆಂದು ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top