- ಶೇಂಗಾ ಬಿತ್ತಲು ಸಕಾಲ. ತಡವಾದಂತೆ.. ಸಮಸ್ಯೆ ಉಂಟು. ಬೀಜೋಪಚಾರ; ಟ್ರೈಕೋಡರ್ಮಾ ಸಂವರ್ಧಿತ ಕೊಟ್ಟಿಗೆ ಗೊಬ್ಬರ, ಜಿಜಿಂಬೋ (ಜಿಪ್ಸಂ, ಜಿಂಕ್,ಬೋರಾನ್) ಬಳಕೆ ಅತ್ಯಗತ್ಯ.
- ನೀರಾವರಿಯಲ್ಲಿ ಗೋಧಿ ಬಿತ್ತನೆಗೆ ಸಕಾಲ. ಎಕರೆಗೆ 60 ಕೆಜಿ ಬೀಜ ಒಮ್ಮುಖ ಬಿತ್ತನೆ, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ.
- ನೀರಾವರಿಯಲ್ಲಿ ಕಡಲೆ ಬಿತ್ತುವುದು ಲಾಭದಾಯಕ. ಅಗತ್ಯ ಸಲಹೆ ಪಡೆಯಬಯಸುವವರಿಗೆ ಸದಾ ಸ್ವಾಗತ.
- ಹೆಸರು, ಉದ್ದು, ಅಲಸಂದೆ ಸೋಯಾ ಅವರೆ ಈಗ ಬಿತ್ತಬಾರದು.
- ತಿಂಗಳವರೆ, ಕ್ಷೇತ್ರ ಅವರೆ ಬಿತ್ತನೆಗೆ ಸಕಾಲ.
- ಹಿಂಗಾರಿ ಜೋಳದಲ್ಲಿ ಸುಳಿ ನೊಣ, ಚುಕ್ಕೆ ಲದ್ದಿ ಹುಳು, ಹತೋಟಿ ಬಗ್ಗೆ ಆದ್ಯತೆ ಇರಲಿ.
- ಎಡೆ ಹೊಡೆದು ಬೀಡು ಮುಚ್ಚುವುದು ಅತ್ಯಗತ್ಯ.
- ಕೂಳೆ ಕಬ್ಬು ಮಾಡುವವರು.. ರೋಗ ಬಾಧಿತ ಬುಡ ಕಿತ್ತು ಹಾಕಿ. ಸಾಗುಣಿ (ಗ್ಯಾಪ್) ಇದ್ದಲ್ಲಿ (ಕ್ಷೇತ್ರದ ಅಂಚಿನ ಸಾಲಗಳ ಬುಡ ಕಿತ್ತು ) ಅವುಗಳನ್ನು ತುಂಬಿರಿ. ಸೋಗೆ (ರವುದಿ) ಸುಡದೇ ಜಿಜಿಂಬೋ (ಜಿಪ್ಸಂ, ಜಿಂಕ್, ಬೋರಾನ್) ಬೆರೆಸಿ ಟ್ರ್ಯಾಶ್ ಕಟರ್ ಬಳಸಿ ಮುಚ್ಚಿಗೆ ಮಾಡಿ. ಗ್ಯಾಪ್ ತುಂಬದಿದ್ದಲ್ಲಿ ಕುಳೆ ಬೆಳೆ ಇಳುವರಿ ಕಡಿಮೆಯಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9449082829



