ದಾವಣಗೆರೆ: ಬಸ್ ಫುಲ್ ರಶ್ ಇತ್ತು. ಸೀಟ್ ಹಿಡಿಯೋಕೆ ಅಪರಿಚಿತ ವ್ಯಕ್ತಿಗೆ ಕೈಯಲ್ಲಿ ಬ್ಯಾಗ್ ಕೊಟ್ಟಿದ್ದಾರೆ. ಆಗ ಬ್ಯಾಗ್ ತೆಗೆದುಕೊಂಡ ವ್ಯಕ್ತಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ವೃದ್ಧೆಯೊಬ್ಬರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಜಗಳೂರು ನಿವಾಸಿಯಾದ ರಿಶೀದಾಬಾನು ಹಾಗೂ ಪತಿ ಶೇಖ್ ಅಹ್ಮದ್ ಅವರು ತಮ್ಮ ಮಗಳ ಮನೆಗೆ ದಾವಣಗೆರೆಗೆ ಬಂದಿದ್ದರು. ಆಗ ವಿಜಯ ಲಕ್ಷ್ಮಿ ರೋಡ್ ನಲ್ಲಿರುವ ಪರಮಾರ್ ಜ್ಯೂಯಲರ್ಸ್ ನಲ್ಲಿ 13 ಗ್ರಾಂನ ಬಂಗಾದ ಸರವನ್ನು ರಿಪೇರಿ ಮಾಡಿಸಿ ಬ್ಯಾಗ್ ನಲ್ಲಿ ಇಟ್ಟಿದ್ದಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದರು. ಆಗ ಬಸ್ ರಶ್ ಇದ್ದ ಕಾರಣ ಸೀಟ್ ಹಿಡಿಯೋಕೆ ಅಪರಿಚಿತ ವ್ಯಕ್ತಿ ಕೈಗೆಡ ಬ್ಯಾಗ್ ಕೊಟ್ಟಿದ್ದರು. ಆದರೆ, ಆತ್ ಬಸ್ ಇಳಿಯುವಾಗ ಬ್ಯಾಗ್ ನಲ್ಲಿದ್ದ 13 ಗ್ರಾಂ ಬಂಗಾರದ ಸರ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.



