Connect with us

Dvgsuddi Kannada | online news portal | Kannada news online

ಕ್ರಿಕೆಟ್ ಬೆಟ್ಟಿಂಗ್:  ಮೂರು ಕಡೆ ದಾವಣಗೆರೆ ಪೊಲೀಸರ ದಾಳಿ

ಕ್ರೈಂ ಸುದ್ದಿ

ಕ್ರಿಕೆಟ್ ಬೆಟ್ಟಿಂಗ್:  ಮೂರು ಕಡೆ ದಾವಣಗೆರೆ ಪೊಲೀಸರ ದಾಳಿ

ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರದ ಮೂರು ಕಡೆ ಪೊಲೀಸರು ದಾಳಿ ನಡೆಸಿದ್ದಾರೆ.

 ಪ್ರಕರಣ 1: ಅ. 01 ರಂದು ದಾವಣಗೆರೆ ವಿದ್ಯಾನಗರ ಪೊಲೀಸ್  ಠಾಣಾ ವ್ಯಾಪ್ತಿಯ ನೂತನ ಕಾಲೇಜು ರಸ್ತೆಯ ಸವಿತಾ ಹೋಟೆಲ್ ಮುಂಭಾಗದ ಸಾರ್ವಜನಿಕ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದಾರೆ ಎಂಬ  ಖಚಿತ ಮಾಹಿತಿ ಬಂದ ಮೇರೆಗೆ  ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ದಾವಣಗೆರೆ ಡಿಸಿಐಬಿ ವಿಭಾಗದ  ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ಜೆ  ಹಾಗೂ ಸಿಬ್ಬಂದಿಗಳು  ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಆರೋಪಿಗಳಾದ 1)ಜಯಪ್ರಕಾಶ್ ಗೌಡ,   2)ಚಂದ್ರು @ ಬೋಡ ಚಂದ್ರು (35) ವಶಕ್ಕೆ ಪಡೆಯಲಾಗಿದೆ. ಇವರಿಂದ  ಸುಮಾರು 26000/- ರೂ ನಗದು ಹಾಗೂ, ಒಂದು ಬೆಟ್ಟಿಂಗ್ ಸ್ಕ್ರೀನ್ ಶಾಟ್, ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಉಳಿದ ಆರೋಪಿತರಾದ ಶಾಂತ, ಷಣ್ಮುಖ, ಉಮೇಶ್  ತಲೆಮರೆಸಿಕೊಂಡಿದ್ದಾರೆ.

ಪ್ರಕರಣ- 2: ಅ. 01 ರಂದು ದಾವಣಗೆರೆ ಬಡಾವಣಾ  ಪೊಲೀಸ್  ಠಾಣಾ ವ್ಯಾಪ್ತಿಯ ರತ್ಮಮ್ಮ ಹಾಸ್ಟೆಲ್ ಪಕ್ಕದ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್  ಲಕ್ಷ್ಮಣ್ ಜೆ  ಹಾಗೂ ಸಿಬ್ಬಂದಿಗಳು  ದಾಳಿ ನಡೆಸಿದ್ದಾರೆ.

ಆರೋಪಿಗಳಾದ  1)ಚಿದಾನಂದಪ್ಪ ( 43 ),  2)ಗಣೇಶ@ ಗಣೇಶ ಮೂರ್ತಿ (39) 3)ಸರ್ತನಾರಾಯಣ ( 45)  4) ಸಂತೋಷ  (36)  ವಶಕ್ಕೆ ಪಡೆಯಲಾಗಿದೆ.  ಆರೋಪಿತರಿಂದ ಸುಮಾರು 24000/- ರೂ ನಗದು ಹಾಗೂ  04 ಬೆಟ್ಟಿಂಗ್ ಸ್ಕ್ರೀನ್ ಶಾಟ್, 04 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು,ಮತ್ತೊಬ್ಬ ಆರೋಪಿತನಾದ ಮಂಜುನಾಥ್  ತಲೆಮರೆಸಿಕೊಂಡಿದ್ದಾರೆ.

ಪ್ರಕರಣ-3: ಅ. 01 ರಂದು ದಾವಣಗೆರೆ ಕೆಟಿಜೆ ನಗರ  ಪೊಲೀಸ್  ಠಾಣಾ ವ್ಯಾಪ್ತಿಯ ಸಿದ್ದಮ್ಮ ಪಾರ್ಕ್ ನಲ್ಲಿ   ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿರುವ  ದೂರಿನ  ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮುಸ್ತಾಕ್ ಅಹಮ್ಮದ್ ಹಾಗೂ ಸಿಬ್ಬಂದಿಗಳು  ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಆರೋಪಿತರಾದ 1)ವಿದ್ಯಾಧರ್ ( 25 ) , 2)ಕಿರಣ್ ಪಿ  (26) ವಶಕ್ಕೆ ಪಡೆಯಲಾಗಿದೆ.  ಆರೋಪಿತರಿಂದ ಸುಮಾರು 22000/- ರೂ ನಗದು ಹಾಗೂ  ಒಂದು ಮೊಬೈಲ್,  ಬೆಟ್ಟಿಂಗ್ ಚೀಟಿ ವಶಪಡಿಸಿಕೊಂಡಿದ್ದು,  ತಲೆಮರೆಸಿಕೊಂಡಿರುವ ಆರೋಪಿತರಾದ ರಾಹುಲ್ ಮತ್ತು ರೋಹಿತ್ ಇವರು ತಲೆಮರೆಸಿಕೊಂಡಿದ್ದಾರೆ.

ಈ ಮೂರು ಪ್ರಕರಣಗಳಲ್ಲಿ  ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top