ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕೃಷಿಕರ ಆದಾಉ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದ್ದು, ಕೃಷಿ ವಲಯಕ್ಕೆ 16.5 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇಂದು ಬಜೆಟ್ ಮಂಡನೆಯಲ್ಲಿ ಘೋಷಣೆ ಮಾಡಿದ ಅವರು, 2021-22ನೇ ಸಾಲಿನ ಬಜೆಟ್ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರಿಗೆ ಯೋಜನೆ ತರಲಾಗುವುದು. ಭತ್ತ ಮತ್ತು ಗೋಧಿ ಖರೀದಿಸುವುದಾಗಿ ಹೇಳಲಾಗಿದೆ. ಅಲ್ಲದೆ ಹಲವು ಮಹತ್ತರ ಯೋಜನೆಗೂ ಆದ್ಯತೆ ನೀಡಿದ್ದು, ಅದರ ವಿವರ ಇಲ್ಲಿದೆ.
- ರೈತರಿಗೆ 16.5 ಲಕ್ಷ ಕೋಟಿ ರೂಪಾಯಿ ಸಾಲ
- ಗೋಧಿ ಖರೀದಿಗೆ 75 ಸಾವಿರ ಕೋಟಿ ರೂಪಾಯಿ
- ಭತ್ತ ಖರೀದಿಗೆ 1.41 ಲಕ್ಷ ಸಾವಿರ ಕೋಟಿ ಹಣ ಮೀಸಲು
- ಪಶುಪಾಲನೆ -ಕಕ್ಕುಟೋದ್ಯಮಕ್ಕೆ ಹೆಚ್ಚಿನ ಅನುದಾನ
- ಇ ನ್ಯಾಮ್ಸ್ನಲ್ಲಿ ಸಾವಿರಕ್ಕೂ ಅಧಿಕ ಕೃಷಿ ಮಂಡಿಗಳ ಸೇರ್ಪಡೆ
- ಕೃಷಿ ವಲಯಕ್ಕೆ 16.5 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿ
- ದೇಶದಲ್ಲಿ 5 ಮೀನುಗಾರಿಕೆ ಹಬ್ ಸ್ಥಾಪನೆ
- ದ್ವಿದಳ ಧಾನ್ಯಗಳ ಖರೀದಿಗೆ 10,500 ಕೋಟಿ ರೂ. ಮೀಸಲು
- ಎಪಿಎಂಸಿಗಳ ಸಬಲೀಕರಣಕ್ಕೆ ಕೇಂದ್ರದ ಯೋಜನೆ ಜಾರಿ
- ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ ರೂಪಾಯಿ



