Connect with us

Dvgsuddi Kannada | online news portal | Kannada news online

ಅಬಕಾರಿ ಖಾತೆಯಲ್ಲಿ ನಾನು ಮಾಡೋ ಕೆಲಸ ಏನು ಇದೆ: ನೂತನ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ

ಪ್ರಮುಖ ಸುದ್ದಿ

ಅಬಕಾರಿ ಖಾತೆಯಲ್ಲಿ ನಾನು ಮಾಡೋ ಕೆಲಸ ಏನು ಇದೆ: ನೂತನ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ

ಬೆಂಗಳೂರು : ಸಿಎಂ ಬಿ.ಎಸ್.  ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ ನಂತರ ಇದೀಗ ಖಾತೆ ಕ್ಯಾತೆ ಶುರುವಾಗಿದೆ.  ಇದೀಗ ಬಹಿರಂಗವಾಗಿಯೇ ನೂತನ ಸಚಿವರ ಅಸಮಾಧಾನ ಹೊರ ಹಾಕಿದ್ಧಾರೆ. ನೂತನ ಸಚಿವ ಎಂಟಿಬಿ ನಾಗರಾಜ್, ಅಬಕಾರಿ ಸಚಿನಾಗಿ ಮಾಡೋ ಕೆಲಸ ಏನಿದೆ.? ನಾನು ಸಿಎಂ ಯಡಿಯೂರಪ್ಪಗೆ ಅಬಕಾರಿ ಇಲಾಖೆ ಬೇಡ ಎಂದು ಹೇಳಿದ್ದೇನೆ ಎಂಬುದಾಗಿ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಸಿಎಂ ಯಡಿಯೂರಪ್ಪ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ವಸತಿ ಖಾತೆಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಅಬಕಾರಿ ಇಲಾಖೆ ಬೇಡ ಎಂದು ಸಿಎಂಗೆ ಹೇಳಿದ್ದೇನೆ. ಇದು ನಾನು ಕೆಲಸ ಮಾಡುವ ಖಾತೆ ಅಲ್ಲ. ಅಬಕಾರಿಯಲ್ಲಿ ಮಾಡುವ ಕೆಲಸ ಏನಿದೆ.? ಬಡವರಿಗೆ ಸೈಟ್, ಮನೆ ಕೊಡುವ ಕೆಲಸ ಮಾಡಬಹುದು ಎಂಬುದಾಗಿ ಹೇಳುವ ಮೂಲಕ, ಪರೋಕ್ಷವಾಗಿ ವಸತಿ ಖಾತೆ ಬೇಕೆಂದು ಎಂಟಿಬಿ ನಾಗರಾಜ್ ಬೇಡಿಕೆ ಇಟ್ಟಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});