Connect with us

Dvgsuddi Kannada | online news portal | Kannada news online

ಡಿ.14 ರಂದು ವರ್ಷದ ಅಂತಿಮ ಸೂರ್ಯಗ್ರಹಣ: ಯಾವ ರಾಶಿಗೆ ಲಾಭ, ಯಾವ ರಾಶಿಗೆ ನಷ್ಟ ..?

ಜ್ಯೋತಿಷ್ಯ

ಡಿ.14 ರಂದು ವರ್ಷದ ಅಂತಿಮ ಸೂರ್ಯಗ್ರಹಣ: ಯಾವ ರಾಶಿಗೆ ಲಾಭ, ಯಾವ ರಾಶಿಗೆ ನಷ್ಟ ..?

ಭಾರತೀಯ ಪಂಚಾಂಗದ ಪ್ರಕಾರ ಡಿಸೆಂಬರ್ 14 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿರಲಿದೆ.ಜ್ಯೋತಿಷ್ಯ ಲೆಕ್ಕಾಚಾರ ಮತ್ತು ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ, ಈ ಸೂರ್ಯಗ್ರಹಣವು ಡಿಸೆಂಬರ್ 14 ರಂದು ಸಂಜೆ 7 ಗಂಟೆ 3 ನಿಮಿಷಕ್ಕೆ ಸ್ಪರ್ಶ ಆರಂಭಗೊಂಡು ಡಿಸೆಂಬರ್ 15 ರ ರಾತ್ರಿ ಅಂದರೆ 12.23 ಕ್ಕೆ ಮೋಕ್ಷ ಗೊಳ್ಳಲಿದೆ ಅಂದರೆ ಮುಕ್ತಾಯಗೊಳ್ಳಲಿದೆ.

ನವೆಂಬರ್ 30 ರಂದು ಈ ವರ್ಷದ ಅಂತಿಮ ಚಂದ್ರಗ್ರಹಣ ಸಂಭವಿಸಿತ್ತು. ಈ ಚಂದ್ರಗ್ರಹಣದ 15 ದಿನಗಳ ಒಳಗೆಯೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಒಟ್ಟು 15 ದಿನಗಳ ಒಳಗೆಯೇ ಎರಡು ಗ್ರಹಣಗಳು ಸಂಭವಿಸುತ್ತಿರುವ ಕಾರಣ ಭಾರಿ ಮಹತ್ವ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹಾಗಾಗಿ ಆಚರಣೆ ಮಾಡುವ ಅವಶ್ಯಕತೆ ಇರುವುದಿಲ್ಲ ,ಹೀಗಾಗಿ ಈ ಗ್ರಹಣದ ಸೂತಕ ಕಾಲಕ್ಕೆ ಹೆಚ್ಚು ಮಹತ್ವವಿರುವುದಿಲ್ಲ. ಈ ಗ್ರಹಣ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ ಅಟ್ಲಾಂಟಿಕ್, ಹಿಂದೂ ಮಹಾಸಾಗರ ಹಾಗೂ ಪ್ರಶಾಂತ್ ಮಹಾಸಾಗರದ ಹಲವು ಪ್ರಾಂತ್ಯಗಳಲ್ಲಿ ಗೋಚರಿಸಲಿದೆ.

ವೃಶ್ಚಿಕ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ವೃಶ್ಚಿಕ ಜಾತಕ ಹೊಂದಿದ ಜನರ ಸಮಸ್ಯೆಗಳು ಹೆಚ್ಚಾಗಬಹುದು. ಸೂರ್ಯ ದುರ್ಬಲನಾಗುವ ಕಾರಣ ಗೌರವ, ಘನತೆ, ಸಮಾಜದಲ್ಲಿ ಸ್ಥಾನ ಕಡಿಮೆಯಾಗಬಹುದು. ಹಣಕಾಸಿನ ತೀವ್ರ ಸಂಕಟ ಎದುರಿಸುವ ಪ್ರಸಂಗ ಬರಬಹುದು. ಕಾಯಿಲೆಉದರ ದೋಷಗಳು ಬರಬಹುದು.

ಸ್ವಲ್ಪ ಕಣ್ಣಿನ ಸಮಸ್ಯೆ ಇರಬಹುದು. ವಿಷ್ಣುವನ್ನು ಸೂರ್ಯಗ್ರಹಣ ಸಮಯದಲ್ಲಿ ಪೂಜಿಸಬೇಕು.

ಗ್ರಹಣ ಕಾಲದಲ್ಲಿ ನೀವು ಅನುಸರಿಸುವ ನೀತಿ ನಿಯಮಗಳು …
ನೀರನ್ನು ಕುಡಿಯಬಾರದು, ಆಹಾರ ನಿಷೇಧವಿದೆ. ಆಹಾರದ ಮೇಲೆ ದೂರ್ವೆ ಅಥವಾ ತುಳಸಿಯನ್ನು ಇರಿಸಬೇಕು, ಹಲವು ಮಂದಿ ಗ್ರಹಣ ಕಳೆದ ಬಳಿಕ ಸ್ನಾನಮಾಡಿ, ಶುಭ್ರ ವಸ್ತ್ರವನ್ನು ಧರಿಸುತ್ತಾರೆ. ಸೂರ್ಯಾರಾಧನೆ ಮಾಡುತ್ತಾರೆ.

ಗರ್ಭಿಣಿಯನ್ನು ಮನೆಯಿಂದ ಹೊರಬರಕೂಡದು ಮನೆಯಲ್ಲಿಯೇ ಸಂತಾನ ಗೋಪಾಲ ಮಂತ್ರ ಪಠಿಸಬೇಕು.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top