Connect with us

Dvgsuddi Kannada | online news portal | Kannada news online

ಗೋಗ್ರೀನ್  ಸಂಸ್ಥೆಯಿಂದ ಬನ್ನಿ ಮಂಟಪ ಸ್ವಚ್ಛತೆ

ದಾವಣಗೆರೆ

ಗೋಗ್ರೀನ್  ಸಂಸ್ಥೆಯಿಂದ ಬನ್ನಿ ಮಂಟಪ ಸ್ವಚ್ಛತೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ:ಗೋಗ್ರೀನ್ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ಪ್ರವೀಣ್ ಫಾರ್ಮ  ಸಹಯೋಗದೊಂದಿಗೆ  ಭಾನುವಾರ ನಗರದ  ಜೈನ ಬಡಾವಣೆಯ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ ಅವರಣ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನವ ರಾತ್ರಿ ದಸರಾ ಹಬ್ಬದ ಪ್ರಯುಕ್ತ ಬನ್ನಿ ಮರ ಪೂಜೆ  ಮಹಿಳೆಯರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಬನ್ನಿ ಮರ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸ್ವಚ್ಛತಾ ಕಾರ್ಯಕ್ಕೆ ದೇವಸ್ಥಾನ  ಆರ್ಚಕರು ಸ್ಥಳೀಯ ಮಕ್ಕಳು ಸಹ ಸಹಕಾರ ನೀಡಿ ಸ್ವಚ್ಛತಾ ಕಾರ್ಯ ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮ ದ ಅಧ್ಯಕ್ಷತೆ  ವಹಿಸಿದ್ದ  ಸುರೇಶ್ ಕೆ.ಎನ್ ಮಾತನಾಡಿ, ಸ್ವಚ್ಛತೆ ಕಾರ್ಯ ಕೇವಲ ತೋರಿಕೆಗಾಗಿ ಮಾಡುವುದಲ್ಲ. ಅದು ಸ್ವಯಂ ಪ್ರೇರಣೆಯಿಂದ ಕಾರ್ಯರೂಪಕ್ಕೆ ಬರಬೇಕು. ಆಗ ನಮ್ಮ ಸುತ್ತಮುತ್ತಲಿನ ಪರಿಸರವಾಗಿ ಕಾಣಲು ಸಾಧ್ಯ ಎಂದರು

ಆಯೋಜಕ ಪ್ರವೀಣ್  ಮಾತನಾಡಿ, ಪ್ರತಿ  ಬಡಾವಣೆ ಗಳಲ್ಲೂ , ಆಯಾ  ಬಡಾವಣೆಯ ಯುವಕರು ಈ ರೀತಿಯ ಜನರಲ್ಲಿ  ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ ನಮ್ಮ ದೇಶ ಸುಂದರ ಆಗುವ ಕಾಲ ದೂರ ಇಲ್ಲ ಎಂದು ತಿಳಿಸಿದರು.

gogreen dvgsuddi 1

ಪ್ರವೀಣ್ ಕುಮಾರ್ ಮಾತನಾಡಿ, ಗೋ ಗ್ರೀನ್ ಸಂಸ್ಥೆ ಮತ್ತು ರೋಟರಾಕ್ಟ್ ಸಂಸ್ಥೆಯ ಈ  ಕಾರ್ಯ ಸ್ವಯಂ ಸೇವಕರಿಗೆ ಮಾದರಿಯಾಗುವಂತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ  ಶ್ರೀಕಾಂತ್ ಬಗಾರೆ,  ಮಹಮದ್ ಗೌಸ್,  ಅಶೋಕ್  ರಾಕುಂಡೆ,  ರೋಟಾರಾಕ್ಟ್  ಸಂಸ್ಥೆಯ ಅಧ್ಯಕ್ಷೆ ಮಾನಸ ವಿ.ಎಸ್,  ಕಾರ್ಯದರ್ಶಿ ಚೇತನ್ ಕುಮಾರ್, ಉಪಾಧ್ಯಕ್ಷ ಜ್ಯೋತಿ  ಎಸ್,  ಹಿರೇಮಠ್,  ಶ್ರೀಧರ್ , ಋತ್ವಿಕ್, ಕಿರಣ್,  ದೇವಸ್ಥಾನದ ಪ್ರಧಾನ ಅರ್ಚಕರು ಹಾಗು ಬಡಾವಣೆಯ ಸಾರ್ವಜನಿಕರು  ಮಕ್ಕಳು ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top