ಡಿವಿಜಿಸುದ್ದಿ.ಕಾಂ, ದಾವಣಗೆರೆ:ಗೋಗ್ರೀನ್ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ಪ್ರವೀಣ್ ಫಾರ್ಮ ಸಹಯೋಗದೊಂದಿಗೆ ಭಾನುವಾರ ನಗರದ ಜೈನ ಬಡಾವಣೆಯ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ ಅವರಣ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನವ ರಾತ್ರಿ ದಸರಾ ಹಬ್ಬದ ಪ್ರಯುಕ್ತ ಬನ್ನಿ ಮರ ಪೂಜೆ ಮಹಿಳೆಯರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಬನ್ನಿ ಮರ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸ್ವಚ್ಛತಾ ಕಾರ್ಯಕ್ಕೆ ದೇವಸ್ಥಾನ ಆರ್ಚಕರು ಸ್ಥಳೀಯ ಮಕ್ಕಳು ಸಹ ಸಹಕಾರ ನೀಡಿ ಸ್ವಚ್ಛತಾ ಕಾರ್ಯ ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸುರೇಶ್ ಕೆ.ಎನ್ ಮಾತನಾಡಿ, ಸ್ವಚ್ಛತೆ ಕಾರ್ಯ ಕೇವಲ ತೋರಿಕೆಗಾಗಿ ಮಾಡುವುದಲ್ಲ. ಅದು ಸ್ವಯಂ ಪ್ರೇರಣೆಯಿಂದ ಕಾರ್ಯರೂಪಕ್ಕೆ ಬರಬೇಕು. ಆಗ ನಮ್ಮ ಸುತ್ತಮುತ್ತಲಿನ ಪರಿಸರವಾಗಿ ಕಾಣಲು ಸಾಧ್ಯ ಎಂದರು
ಆಯೋಜಕ ಪ್ರವೀಣ್ ಮಾತನಾಡಿ, ಪ್ರತಿ ಬಡಾವಣೆ ಗಳಲ್ಲೂ , ಆಯಾ ಬಡಾವಣೆಯ ಯುವಕರು ಈ ರೀತಿಯ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ ನಮ್ಮ ದೇಶ ಸುಂದರ ಆಗುವ ಕಾಲ ದೂರ ಇಲ್ಲ ಎಂದು ತಿಳಿಸಿದರು.

ಪ್ರವೀಣ್ ಕುಮಾರ್ ಮಾತನಾಡಿ, ಗೋ ಗ್ರೀನ್ ಸಂಸ್ಥೆ ಮತ್ತು ರೋಟರಾಕ್ಟ್ ಸಂಸ್ಥೆಯ ಈ ಕಾರ್ಯ ಸ್ವಯಂ ಸೇವಕರಿಗೆ ಮಾದರಿಯಾಗುವಂತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶ್ರೀಕಾಂತ್ ಬಗಾರೆ, ಮಹಮದ್ ಗೌಸ್, ಅಶೋಕ್ ರಾಕುಂಡೆ, ರೋಟಾರಾಕ್ಟ್ ಸಂಸ್ಥೆಯ ಅಧ್ಯಕ್ಷೆ ಮಾನಸ ವಿ.ಎಸ್, ಕಾರ್ಯದರ್ಶಿ ಚೇತನ್ ಕುಮಾರ್, ಉಪಾಧ್ಯಕ್ಷ ಜ್ಯೋತಿ ಎಸ್, ಹಿರೇಮಠ್, ಶ್ರೀಧರ್ , ಋತ್ವಿಕ್, ಕಿರಣ್, ದೇವಸ್ಥಾನದ ಪ್ರಧಾನ ಅರ್ಚಕರು ಹಾಗು ಬಡಾವಣೆಯ ಸಾರ್ವಜನಿಕರು ಮಕ್ಕಳು ಭಾಗವಹಿಸಿದ್ದರು.



