ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿಂದು ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಹೊನ್ನಾಳಿಯ 24 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈತ ಮಹಾರಾಷ್ಟ್ರದ ಲಾತೂರ್ ನಿಂದ ಕೊಲ್ಲಾಪುರಕ್ಕೆ ಬಂದು ಅಲ್ಲಿಂದ ಹೊನ್ನಾಳಿಯ ಮಾದೇನಹಳ್ಳಿಗೆ ಬಂದಿರುವ ಟ್ರಾವಲ್ ಹಿಸ್ಟರಿ ಹೊಂದಿದ್ಧಾನೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಮಹಾರಾಷ್ಟ್ರದ ಲಾತೂರ್ ನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕ ಲಾಕ್ ಡೌನ್ ಸಂದರ್ಭದಲ್ಲಿ ಕೊಲ್ಲಾಪುರಕ್ಕೆ ಬಂದು, ಒಂದುವರೆ ತಿಂಗಳು ಅಲ್ಲಿಯೇ ಲಾಕ್ ಆಗಿದ್ದನು. ಆಗ ಮೈಸೂರು, ಹೊಸನಗರ, ಕುಂದಾಪುರ ಯುವಕರ ಪರಿಚಯವಾಗುತ್ತದೆ. ಇವರೆಲ್ಲ ಸೇರಿಕೊಂಡು ಲಾರಿಯಲ್ಲಿ ಹುಬ್ಬಳ್ಳಿಗೆ ಬಂದು ಬಂದಿದ್ದಾರೆ. ಅಲ್ಲಿಂದ ಹೊನ್ನಾಳಿಯ ಯುವಕ ಹರಿಹರಕ್ಕೆ ಮೇ. 9 ರಂದು ಬಂದು ತಲುಪಿದ್ದಾನೆ. ಹರಿಹರಕ್ಕೆ ತಮ್ಮ ಸಹೋರನ್ನು ಕರೆಸಿಕೊಂಡು ತಮ್ಮ ಊರಾದ ಮಾದೇನಹಳ್ಳಿಗೆ ಹೋಗಿದ್ದಾನೆ. ಆದರೆ, ಗ್ರಾಮದ ಜನರು ಊರ ಹೊರಗೆ ತಡೆದು ತಪಾಸಣೆಗೆ ಒಳಪಡಿಸಿದ್ದಾರೆ. ನಿನ್ನೆ ಯುವಕನಲ್ಲಿ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದದ್ದು, ಇಂದು ಬೆಳಗ್ಗೆಯ ಹೆಲ್ತ್ ಬುಲೆಟಿನ್ ನಲ್ಲಿ ಬಂದಿದೆ ಎಂದರು.
ಯುವಕನ ಸಂಪರ್ಕದಲ್ಲಿದ್ದ 14 ಜನರ ಕ್ವಾರಂಟೈನ್
24 ವರ್ಷದ ಯುವಕ ಪ್ರಾಥಮಿಕವಾಗಿ 6 ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ. ಕುಟುಂಬದ ಮೂವರು, ಇತರೆ 3 ಜನರ ಜೊತೆ ಸಂಪರ್ಕ ಹೊಂದಿದ್ದಾನೆ. ಇದಲ್ಲದೆ, ಯುವಕನಿಗೆ ಚಿಕಿತ್ಸೆ ನೀಡಿದ 8 ಜನರು ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರೆಲ್ಲನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

1,437 ವರದಿ ಬಾಕಿ
ಜಿಲ್ಲೆಯಲ್ಲಿ ಇದುವರೆಗೆ 90 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 4 ಜನ ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಇನ್ನು 84 ಪ್ರಕರಣಗಳು ಸಕ್ರಿಯವಾಗಿವೆ. ಇಂದು ಕೂಡ 401 ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು1,437 ಮಾದರಿ ಇನ್ನು ಬಾಕಿ ಉಳಿದಿವೆ. ಇಂದು ರಾತ್ರಿ ವೇಳೆಗೆ 1 ಸಾವಿರ ಮಾದರಿಗಳು ರನ್ ಆಗುವ ಸಾಧ್ಯತೆ ಇದ್ದು, ನಾಳೆ ಫಲಿತಾಂಶ ಗೊತ್ತಾಗಲಿದೆ ಎಂದರು.
ಪೊಲೀಸ್ ಕ್ವಾಟರ್ಸ್ 9ನೇ ಕಂಟೇನ್ ಮೆಂಟ್ ಝೋನ್
ಈಗಾಗಲೇ ಕಂಟೇನ್ ಮೆಂಟ್ ಝೋನ್ ಗಳಾದ ಬಾಷಾಮಗರ, ಜಾಲಿನಗರ, ಇಮಾಂ ನಗರ, ಕೆಟಿಜಿ ನಗರ, ಎಸ್ ಪಿಎಸ್ ನಗರ, ಬೇತೂರು ರಸ್ತೆ, ರೈತರ ಬೀದಿ, ಶಿವನಗರ ಜೊತೆಗೆ ಪೊಲೀಸ್ ಕ್ವಾಟರ್ಸ್ ಹೊಸದಾಗಿ ಕಂಟೇನ್ ಮೆಂಟ್ ಝೋನ್ ಆಗಿದೆ.



