ನವದೆಹಲಿ: ನೈರುತ್ಯ ಮುಂಗಾರು ಜೂನ್ 5ಕ್ಕೆ ಕೇರಳಕ್ಕೆ ಪ್ರವೇಶ ಪಡೆಯಲಿದ್ದು, ವಾಡಿಕೆಗಿಂತ ನಾಲ್ಕು ದಿನ ವಿಳಂಬವಾಗಿ ಕೇರಳ ಪ್ರವೇಶಿದಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಬಾರಿ ಮುಂಗಾರು ಸಾಧಾರಣ ರೀತಿಯಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
This year, the onset of southwest monsoon over Kerala is likely to be slightly delayed as compared to normal date of onset of 1st June. The monsoon onset over Kerala this year is likely to be on 5th June with a model error of ± 4 days. pic.twitter.com/0A9qScMS5b
— IMD Weather (@IMDWeather) May 15, 2020
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಮೇ 16ರಂದು ಮುಂಗಾರು ಆಗಮಿಸಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಇರುವ ಹಿನ್ನೆಲೆ ಮೇ.22ಕ್ಕೆ ಬರಬೇಕಿದ್ದ ಮುಂಗಾರು ಮುಂಚಿತವಾಗಿ ಬಂದಿದೆ. ಕೇರಳದಲ್ಲಿ ಜೂನ್ನಿಂದ ಸೆಪ್ಟೆಂಬರ್ ವರೆಗೆ 4 ತಿಂಗಳು ಕಾಲ ಮಳೆ ಮುಂದುವರಿಯಲಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಪ್ರವೇಶ ಪಡೆಯಬೇಕಿತ್ತು. ಆದರೆ, ಈ ಬಾರಿ ನಾಲ್ಕು ದಿನ ವಿಳಂಬವಾಗಿ ಮುಂಗಾರಿ ಪ್ರವೇಶ ಪಡೆಯಲಿದೆ.
ಕಳೆದ ವರ್ಷ ಮೇ.18ರಂದು ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ಗೆ ತಲುಪಿತ್ತು. 20ನೇ ತಾರೀಕಿಗೆ ಬರಬೇಕಿದ್ದ ಮುಂಗಾರು 2 ದಿನಕ್ಕೆ ಮುಂಚಿತವಾಗಿ ಬಂದಿತ್ತು. ಕೇರಳದ್ಲಲಿ ಜೂನ್ 8ಕ್ಕೆ ಮುಂಗಾರು ಮಳೆಯಾಗಿತ್ತು. ಜುಲೈ 19ಕ್ಕೆ ದೇಶದಾದ್ಯಂತ ಮಳೆಯಾಗಿತ್ತು.



