ಕವಿತೆ|| ಮದ್ದು ಗುಂಡು ಇಲ್ಲದೆ ಯುದ್ಧ ಗೆದ್ದಿದೆ…!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

 

ಕಣ್ಣಿಗೆ ಕಾಣದ ಜಂತವೊಂದು
ಜಗಕ್ಕೆ ಹೊಸ ಪಾಠವ ಕಲಿಸಿದೆ
ಹೆಣ್ಣು ಹೊನ್ನು ಮಣ್ಣು ತನ್ನದೆಂದು
ಮರೆದವರ ದರ್ಪವನು ಅಡಗಿಸಿದೆ.

ಜನನಿ ಜನ್ಮಭೂಮಿ ಮರೆತು ಹೋದ
ಜನರನು ಮರಳಿ ಗೂಡಿಗೆ ಕರೆಸಿದೆ
ಜನ್ಮದಾತರ ಕಣ್ಣೀರು ಹಾಕಿಸ ಮೆರೆದ
ಜನರಿಗೆ ಹೆತ್ತವರ ಬೆಲೆಯನು ತಿಳಿಸಿದೆ.

ನೆಲ, ಜಲಚರ ಜೀವಿಗಳ ತಿಂದು ತೇಗಿದ
ನರರಾಕ್ಷಸರಿಗೆ ಜೀವ ಭಯ ಮೂಡಿಸಿದೆ
ಕಾಣದ ಕಡಲಿಗೆ ಹಂಬಲಿಸಿದವರಿಗೆ
ಉಪ್ಪು ನೀರು ಕುಡಿಸಿ ಬುದ್ಧಿ ಹೇಳಿದೆ.

ಮಂದಿರ ಚರ್ಚ್ ಮಸೀದಿಯ ದೇವ್ರುಗಳ
ಮರೆಸಿ ವೈದ್ಯರನ್ನೇ ದೇವ್ರೆಂದು ಸಾರಿದೆ
ಅರಮನೆಯಲ್ಲಿ ಸುಖದಿ ಮಲಗಿದ್ದವರಿಗೆ
ನೆರೆಮನೆಯವರ ನೆನಪು ಮಾಡಿದೆ.

ಪ್ರಕೃತಿಯನು ವಿಕೃತಗೊಳಿಸಿದವರಿಗೆ
ಪ್ರಕೃತಿಯ ಮಹತ್ವವನ್ನು ತಿಳಿಸಿದೆ
ಬಲಾಢ್ಯರೆಂದು ಕೊಬ್ಬಿದ ರಾಷ್ಟ್ರಗಳಿಗೆ
ಬಲವಾದ ಪೆಟ್ಟನ್ನು ಕೊಡಲು ಬಂದಿದೆ.

ಜಾತಿ ಮತ ಧರ್ಮಗಳ ಪೊರೆಯಿಂದ
ಕುರುಡರಾದವರಿಗೆ ಬೆಳಕು ನೀಡಿದೆ
ಯುದ್ಧ ಭೀಭತ್ಸ ಉತ್ಸಾಹಿಗಳೆದರು
ಮುದ್ದು ಗುಂಡಿಲ್ಲದೆ ಯುದ್ಧವ ಗೆದ್ದಿದೆ.

ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವಮಂಟಪ, ದಾವಣಗೆರೆ.
9740050150..

IMG 20200506 WA0025

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *