ಫೋಟೋ ಕ್ಯಾಪ್ಷನ್: ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉದ್ಯಮಶೀಲ ದಿನದ ಅಂಗವಾಗಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಊರಿನ ಮುಖಂಡ ಯೋಗಿಶ್ ಬಿ.ಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮಲ್ಲಯ್ಯ, ಪ್ರಾಧ್ಯಾಪಕರಾದ ಕೆ.ಜೆ. ಶಿವಕುಮಾರ್, ಯೋಗೇಶ್, ಹನುಮಂತಪ್ಪ, ಮಧುಸೂಧನ್, ರವಿಕುಮಾರ್, ಪ್ರಕಾಶ್, ಧನಂಜಯ ಎಂ.ಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಆಹಾರ ಮೇಳದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ತಿಂಡಿ-ತಿನಿಸುಗಳನ್ನು ತಯಾರಿಸಿ, ವಿಭಿನ್ನ ರೀತಿಯಲ್ಲಿ ಪ್ರದರ್ಶಕ್ಕೆ ಇಟ್ಟಿದ್ದರು. ಆಹಾರ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.






