Connect with us

Dvgsuddi Kannada | online news portal | Kannada news online

ಭಾರತ- ಪಾಕ್  ಕ್ರಿಕೆಟ್ ಸರಣಿ: ಅಖ್ತರ್ ಹೇಳಿಕೆಗೆ  ತಿರುಗೇಟು ನೀಡಿದ ಕಪೀಲ್ ದೇವ್

ಪ್ರಮುಖ ಸುದ್ದಿ

ಭಾರತ- ಪಾಕ್  ಕ್ರಿಕೆಟ್ ಸರಣಿ: ಅಖ್ತರ್ ಹೇಳಿಕೆಗೆ  ತಿರುಗೇಟು ನೀಡಿದ ಕಪೀಲ್ ದೇವ್

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತ- ಪಾಕ್ ಸರಣಿ ಆಯೋಜನೆ ಮೂಲಕ ಹಣ ಸಂಗ್ರಹಿಸಬಹುದೆಂದು ಹೇಳಿಕೆ ನೀಡಿದ್ದ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಗೆ ಭಾರತದ ಮಾಜಿ ಕ್ರಿಕೆಟರ್ ಕಪೀಲ್ ದೇವ್  ತಿರುಗೇಟು ನೀಡಿದ್ದಾರೆ. ಭಾರತಕ್ಕೆಹಣದ ಅವಶ್ಯಕತೆ ಇಲ್ಲ, ಜೀವನಕ್ಕೆ ಕುತ್ತು ತರುವ ಕೆಲಸ ಕೈ‌ ಹಾಕಬಾರದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Kapil Dev BCCL482 768x400 1

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಹಣಕ್ಕಾಗಿ ಪಾಕಿಸ್ತಾನ ಮತ್ತು ಇಂಡಿಯಾ ಮತ್ತೆ ಸರಣಿ ಆಡಬೇಕು ಎಂದು ಶೋಯೆಬ್ ಹೇಳಿದ್ದರು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ಭಾರತಕ್ಕೆ ಹಣ ಬೇಕಾಗಿಲ್ಲ. ನಾವು ಏಕೆ ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ದೂಡಬೇಕು. ಈಗ ಮನೆಯಲ್ಲೇ ಕುಳಿತು ವಿಶ್ರಾಂತಿ ಪಡೆಯಿರಿ. ಜೀವಕ್ಕೆ ಕುತ್ತು ತರುವ ಕೆಲಸಕ್ಕೆ ಯಾಕೆ ಕೈಹಾಕಬೇಕು.

india pak2

ಈ ವಿಚಾರದಲ್ಲಿ ನಮಗೆ ಯಾರ ಸಲಹೆಯು ಬೇಕಾಗಿಲ್ಲ. ನಮ್ಮಲ್ಲಿ ಜನರನ್ನು ಸುರಕ್ಷಿತವಾಗಿ ಇಡಲು ಅಧಿಕಾರಿಗಳು ಬಹಳ ಕಷ್ಟಪಡುತ್ತಿದ್ದಾರೆ.‌ಮನೆಯಲ್ಲಿಯೇ ಇದ್ದು ಸಹಕರಿಸೋಣ. ಈ ರೀತಿಯ ವಿಚಾರಗಳನ್ನು ಹೇಳುವುದು ಸುಲಭ. ಆದರೆ ಆಯೋಜನೆ ಮಾಡುವುದು ಕಷ್ಟ ಎಂದು ಕಪಿಲ್ ಅಖ್ತರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top