ದಾವಣಗೆರೆ: ಫಸಲಿಗೆ ಬಂದ 610 ಅಡಿಕೆ ಮರ ಕಡಿದು ನಷ್ಟ ಉಂಟು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದೇಶನಾಯ್ಕ.ಕೆ (38) ಎಂಬುವವರ ಬುಳ್ಳಾಪುರ ಗ್ರಾಮದಲ್ಲಿ 01 ಎಕರೆ 15 ಗುಂಟೆ ಜಮೀನಿನಲ್ಲಿದ್ದ 660 ಅಡಿಕೆ ಮರಗಳನ್ನು ಜು.3ರಂದು ಕಡಿದು ಹಾಕಲಾಗಿತ್ತು.
ಸಂಜೆ 7:00 ಗಂಟೆಯಿಂದ
ಜಮೀನಿನಲ್ಲಿದ್ದ 660 ಅಡಿಕೆ ಮರಗಳಲ್ಲಿ 50 ಮರಗಳನ್ನು ಬಿಟ್ಟು, ಉಳಿದ 610 ಗಿಡಗಳನ್ನು ಕಡಿದು ನಾಶ ಮಾಡಿದ್ದರು. ಇದರಿಂದ 5ರಿಂದ ಐದುವರೆ ಲಕ್ಷ ನಷ್ಟ ಆಗಿದ್ದು, ಆರೋಪಿಗಳನ್ನು ಪತ್ತೆ ಮಾಡುವಂತೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಅಜಯ.ಎಸ್.ಬಿ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು. ಈ ತಂಡ ಪ್ರಕರಣದ ಆರೋಪಿತರಾದ 1) ಕಿರಣ.ಆರ್ ( 26), ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ವಶಕ್ಕೆ ಪಡೆದಿದ್ದು, ಎ-1 ಆರೋಪಿಯನ್ನು ದಸ್ತಗಿರಿಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಪ್ರಕರಣ ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಶೇಖರ್.ಹೆಚ್.ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


