ದಾವಣಗೆರೆ: ರಾತ್ರೋರಾತ್ರಿ ದುಷ್ಕರ್ಮಿಗಳು ಫಸಲಿಗೆ ಬಂದಿದ್ದ ನಾಲ್ಕು ವರ್ಷದ 450 ಅಡಿಕೆ ಮರಗಳನ್ನು ಕಡಿದು ಹಾಕಿದ ಘಟನೆ ಮಾಯಕೊಂಡ ಸಮೀಪದ ಬುಳ್ಳಾಪುರ ತಾಂಡದಲ್ಲಿ ನಡೆದಿದೆ.
ದಾವಣಗೆರೆ: ಲೋಕಾಯುಕ್ತ ಬಲೆಗೆ ಬಿದ್ದ
ಸರ್ವೆ ಇಲಾಖೆಯ ಸೂಪರ್ ವೈಸರ್ , ಭೂಮಾಪಕ
ರೈತ ಸಿದ್ದೇಶ್ ನಾಯ್ಕ ಸ.ನಂ 15ರಲ್ಲಿ 1 ಎಕರೆ 20 ಗುಂಟೆ ಜಮೀನಿನಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ 650 ಅಡಿಕೆ ಸಸಿ ನೆಟ್ಟಿದ್ದರು. ಇದರಲ್ಲಿ ರಾತ್ರೋರಾತ್ರಿ ಯಾರೋ ದುಷ್ಕರ್ಮಿಗಳು 450 ಮರ ಕಡಿದು ಹಾಕಿದ್ದಾರೆ. ಇನ್ನೊಂದು ವರ್ಷದಲ್ಲಿ ಫಸಲಿಗೆ ಬರುತ್ತಿದ್ದ ಮಕ್ಕಳಂತೆ ಸಾಕಿದ್ದ ಮರ ನಾಶಪಡಿಸಿದ್ದಾರೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


