ದಾವಣಗೆರೆ: ತಮ್ಮ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದ್ರೆ ಅಧಿಕ ಲಾಭಾಂಶದ ಆಸೆ ತೋರಿಸಿ ವ್ಯಕ್ತಿಯೊಬ್ಬರಿಗೆ ರೂ.5.60 ಲಕ್ಷ ಸೈಬರ್ ವಂಚನೆ ನಡೆದಿದೆ. ಈ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ದಾವಣಗೆರೆ: ಕೊಕ್ಕನೂರು ಮುಖ್ಯೋಪಾಧ್ಯಾಯ ವಿಷ ಸೇವಿಸಿ ಸಾ*ವು
ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 20/01/2025 ರಂದು ದೂರುದಾರ ತಮ್ಮ ಮೊಬೈಲ್ ನಲ್ಲಿ Telegram app ಅನ್ನು ನೋಡುತ್ತಿರುವಾಗ ಅದರಲ್ಲಿ Amazan working benefits Task work from Home Job ನೀಡುತ್ತೇವೆ ಎಂದು ಮೇಸೇಜ್ ಮತ್ತು ಲಿಂಕ್ ಅನ್ನು ಕಳುಹಿಸಿದ್ದು, ಇದರಲ್ಲಿ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆಂದು ತಿಳಿಸಿದ್ದರು.
ಅದರಂತೆ UPI ID ಗೆ ಪೋನ್ ಪೇಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಟಾಸ್ಕ್ ಮೂಲಕ ಹಣ ತುಂಬಲು ಸೂಚಿದ್ದಾರೆ. ಹಂತ ಹಂತವಾಗಿ ಒಟ್ಟು ರೂ.5,60,000/-ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುತ್ತಾರೆ ಅಂತ ನೀಡಿದ ದೂರಿನ ಮೇರೆಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿ ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಯವರಾದ ಅಶೋಕ, ಲೋಹಿತ್, ನಿಜಲಿಂಗಪ್ಪ, ಯೋಗೀಶ್ ನಾಯ್ಕ್, ರವರ ತಂಡವು ಈ ಹಿಂದೆ (ದಿನಾಂಕ:06.09.2025 ರಂದು) ಪ್ರಕರಣದ 1 ನೇ ಆರೋಪಿತನಾದ ಹರೀಶ್ ಕುಮಾರ್ .ಎಂ ಈತನನ್ನು ಬಂಧನ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
ಪ್ರಕರಣದ ತನಿಖೆ ಮುಂದುವರೆದು ನಂತರ ಸದರಿ ಪ್ರಕರಣದ 2ನೇ ಆರೋಪಿ ಗುರುಮೂರ್ತಿ ಎಸ್., 24 ವರ್ಷ, ವಾಸ- ಬೆಂಗಳೂರು ಈತನನ್ನು ಪತ್ತೆ ಮಾಡಿ ದಿನಾಂಕ: 18-06-2026 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಪ್ರಕರಣದಲ್ಲಿ ತನಿಖೆ ಮುಂದುವರೆದಿರುತ್ತದೆ. ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್ಪಿ ಶೇಖರ್ ಹೆಚ್ ಟಿ ಐಪಿಎಸ್ ಪ್ರಶ೦ಸನೆ ವ್ಯಕ್ತಪಡಿಸಿದ್ದಾರ.
ಸಾರ್ವಜನಿಕರ ಸೂಚನೆ : ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಲಿ ಹೂಡಿಕೆ, ಜಾಬ್, ಮ್ಯಾಟ್ರಿಮೋನಿಯಲ್ ಜಾಹಿರಾತುಗಳಿಂದ ಜಾಗರೂಕರಾಗಿರುವಂತೆ ತಿಳಿಸುತ್ತದೆ.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ನೀಡುವ ಬಗ್ಗೆ ಆಮೀಶ್ ಒಡ್ಡುವ ನಕಲಿ ಜಾಹೀರಾತು/ವ್ಯಕ್ತಿಗಳಿಂದ ಜಾಗರೂಕರಾಗಿರುವಂತೆ ಹೂಡಿಕೆ ಅಥವಾ ಯಾವುದೇ ಆನ್ ಲೈನ್ ಡಿಜಿಟಲ್ ಕೆ.ವೈ.ಸಿ ನೋಂದಣೆ ಸಮಯದಲ್ಲಿ ಖಾತರಿಪಡಿಸಿಕೊಳ್ಳಲು ಸೂಚಿಸಿದೆ. ಲಿಂಕ್ , ಆಡಿಯೋ/ವಿಡಿಯೋ ಕಾಲ್ ಗಳನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.


