ಪಿಯುಸಿ ಫಲಿತಾಂಶ; ಶೇ.86.48 ರಷ್ಟು ತೇರ್ಗಡೆ; ವಾಣಿಜ್ಯ ವಿಭಾಗದಲ್ಲಿ ಅದಿತಿ, ವಿದಿಶಾ 600ಕ್ಕೆ 600 ಅಂಕ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಶೇ.86.48 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಅದಿತಿ ಬಾಪು, ದಿಶಾ – 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ಪಿಯುಸಿ ಟಾಪರ್ ವಿವರ

ವಾಣಿಜ್ಯ ವಿಭಾಗ

  • ಅದಿತಿ ಬಾಪು – 600ಕ್ಕೆ 600 ಅಂಕ
    ಜೈನ್ ಕಾಲೇಜ್, ಬೆಂಗಳೂರು
  • ದಿಶಾ – 600ಕ್ಕೆ 600 ಅಂಕ
    ಆಳ್ವಾಸ್ ಕಾಲೇಜ್, ಮೂಡಬಿದ್ರೆ

ವಿಜ್ಞಾನ ವಿಭಾಗ

  • ಪ್ರಿನ್ಸಿಲಾ ಕಾರ್ಡೋಜಾ – 600ಕ್ಕೆ 599 ಅಂಕ
    ಲರ್ನಿಂಗ್‌ ಸೆಂಟರ್ ಕಾಲೇಜ್,ಮಂಗಳೂರು

ಕಲಾ ವಿಭಾಗ

  • ಸಂಗೀತಾ – 600ಕ್ಕೆ 598 ಅಂಕ
    ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)
  • ಅರ್ಚನಾ – 600ಕ್ಕೆ 598 ಅಂಕ
    ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಉತ್ತೀರ್ಣ ಅಂಕವನ್ನು ಶೇ.35ರಿಂದ ಶೇ.33ಕ್ಕೆ ನಿಗದಿ ಮಾಡಿರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.13 ರಷ್ಟು ಏರಿಕೆಯಾಗಿದೆ.

ಕಳೆದ ವರ್ಷ 7.7% ಫಲಿತಾಂಶ ಕಡಿಮೆ ದಾಖಲಾಗಿತ್ತು. 6 ಲಕ್ಷದ 32 ಸಾವಿರದ 200 ಪೈಕಿ 5 ಲಕ್ಷದ 46 ಸಾವಿರದ 698 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.86.48 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಬಾಲಕರು 2,32,928 (83.65%) ಹಾಗೂ ಬಾಲಕಿಯರು 3,13,770 (88.07%) ಉತ್ತೀರ್ಣ ಆಗಿದ್ದಾರೆ.

ಶೇ.96.39 ಫಲಿತಾಂಶದೊಂದಿಗೆ ಉಡುಪಿ ಪ್ರಥಮವಾಗಿದ್ದರೆ 71.21% ಫಲಿತಾಂಶದೊಂದಿಗೆ ಯಾದಗಿರಿ ಕೊನೇ ಸ್ಥಾನದಲ್ಲಿದೆ. ನಗರ ಪ್ರದೇಶದಲ್ಲಿ 85.95% ರಿಸಲ್ಟ್ ಬಂದಿದ್ದರೆ ಗ್ರಾಮೀಣ ಭಾಗದಲ್ಲಿ 87.62% ರಿಸಲ್ಟ್ ದಾಖಲಾಗಿದೆ. ಡಿಸ್ಟಿಂಕ್ಷನ್ 1.70 ಲಕ್ಷ, ಪ್ರಥಮ ದರ್ಜೆ 2.95 ಲಕ್ಷ, ದ್ವಿತೀಯ ದರ್ಜೆ 63,957 ಹಾಗೂ ಜಸ್ಟ್ ಪಾಸಾದವರು 16,827 ವಿದ್ಯಾರ್ಥಿಗಳು. 5,577 ಮಕ್ಕಳು ಶೇ.33ರ ಪಾಸಿಂಗ್ ಮಾರ್ಕ್ಸ್‌ನಿಂದ ಪಾಸಾಗಿದ್ದಾರೆ ಎಂದು ತಿಳಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *